ಚಿನ್ನ ಸಾಗಾಟ ಇಬ್ಬರ ಸೆರೆ

ಕಲ್ಲಿಕೋಟೆ: ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಎರಡು ಕಿಲೋದಷ್ಟು ಚಿನ್ನವನ್ನು ಏರ್ ಕಸ್ಟಮ್ಸ್ ವಿಭಾಗ ವಶಪಡಿಸಿದೆ. ಗುದದ್ವಾರದಲ್ಲಿ ಬಚ್ಚಿಟ್ಟು, ಜ್ಯೂಸರ್‌ನಲ್ಲಿ ಅಡಗಿಸಿಟ್ಟು  ಚಿನ್ನ ಸಾಗಿಸಿದ ಇಬ್ಬರನ್ನು ಕಸ್ಟಡಿಗೆ ತೆಗೆಯಲಾಗಿದೆ. ದಮಾಂನಿಂದ ತಲುಪಿದ ಮಲಪ್ಪುರಂ ನಿವಾಸಿ ಅಮೀರ್ ಪಡಯಂಗಡಿ (೪೦) ಎಂಬಾತನನ್ನು ಶಂಕೆ ಆಧಾರದಲ್ಲಿ ಕಸ್ಟಮ್ಸ್ ಕಸ್ಟಡಿಗೆ ತೆಗೆದಿದೆ. ಈತನನ್ನು ಪರಿಶೀಲಿಸಿದಾಗ ೧೦೭೦.೨೪೦ ಗ್ರಾಂ ತೂಕದ ೪೦ ಕ್ಯಾಪ್ಸೂಲ್ ಚಿನ್ನ ಮಿಶ್ರಿತವನ್ನು ಪತ್ತೆಮಾಡಲಾಗಿದೆ. ಬಳಿಕ ಮಸ್ಕತ್‌ನಿಂದ ತಲುಪಿದ ವಿಮಾನದಿಂದ ಕಲ್ಲಿಕೋಟೆ ನಿವಾಸಿ ಮುಹಮ್ಮದ್ ರಮೀಸ್ (೨೮)ನನ್ನುಕಸ್ಟಡಿಗೆ ತೆಗೆದು ಪರಿಶೀಲಿಸಿದಾಗ ಜ್ಯೂಸರ್‌ನಲ್ಲಿ ಅಡಗಿಸಿಟ್ಟು ಸಾಗಿಸಿದ್ದ ೧೩೯೯.೪೦೦ ಗ್ರಾಂ ಚಿನ್ನದ ತಗಡು ಪತ್ತೆಯಾಗಿದೆ. ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.

You cannot copy contents of this page