ಜಿಲ್ಲಾಧಿಕಾರಿ ವಿಲ್ಲೇಜ್ ಅದಾಲತ್‌ನಲ್ಲಿ ಸ್ವೀಕರಿಸಿದ 1286 ದೂರುಗಳಿಗೆ ಪರಿಹಾರ

ಕಾಸರಗೋಡು: ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಅಧಿಕಾರ ವಹಿಸಿ ಕೊಂಡು ಒಂದು ವರ್ಷ ಪೂರ್ತಿಯಾಗುವುದರೊಳಗೆ ನೇರವಾಗಿ ಸಂದರ್ಶಿಸಿ ಲಭಿಸುವ ದೂರುಗಳಲ್ಲಿ 1286 ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ. ವಿಲೇಜ್ ಅದಾಲತ್ ಕಾರ್ಯಕ್ರಮಗಳಲ್ಲಿ 1472 ದೂರುಗಳು ಲಭಿಸಿತ್ತು. ಜಿಲ್ಲೆಯ 29 ವಿಲ್ಲೇಜ್ಗಳನ್ನು ಜಿಲ್ಲಾಧಿಕಾರಿ ಇದುವರೆಗೆ ಸಂದರ್ಶಿ ಸಿದ್ದಾರೆ. ಉಳಿದ 186 ದೂರುಗಳನ್ನು ಪರಿಗಣಿಸಲಾಗುತ್ತಿದೆ. ಕೊಯಿಪ್ಪಾಡಿ, ಎಡನಾಡು, ಉಪ್ಪಳ, ಕಡಂಬಾರ್, ಎಣ್ಮಕಜೆ, ಮೀಂಜ, ಬಂಬ್ರಾಣ, ಬಾಯಾರು, ಮಧೂರು, ಕೂಡ್ಲು, ಕಾಸರಗೋಡು, ನೀರ್ಚಾಲ್, ಬದಿಯಡ್ಕ, ಮುಳಿಯಾರು, ಬೇಳ, ಆದೂರು ಸಹಿತ 29 ವಿಲ್ಲೇಜ್ಗಳಲ್ಲಿ ಅದಾಲತ್ ನಡೆಸಿದ್ದರು.
ಕಳೆದ ಆಗಸ್ಟ್ ತಿಂಗಳಲ್ಲಿ ಕೊಯಿ ಪ್ಪಾಡಿಯಿಂದ ಆರಂಭಗೊAಡ ವಿಲ್ಲೇಜ್ ಅದಾಲತ್ ಅಕ್ಟೋಬರ್ 17ರಂದು ಬಾಯಾರು ವಿಲ್ಲೇಜ್ನಲ್ಲಿ ಸಮಾಪ್ತಿಗೊಂ ಡಿತು. ದ್ವಿತೀಯ ಹಂತದ ವಿಲ್ಲೇಜ್ ಅದಾಲತ್ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page