ಡಿಸಿಸಿ ಮಾಜಿ ಅಧ್ಯಕ್ಷ ವೆಳ್ತಂಬು ಸಂಸ್ಮರಣೆ

ಪೈವಳಿಕೆ: ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ, ಹಿರಿಯ ಸಹಕಾರಿ ವೆಳ್ತಂಬು ಅವರ ಸಂಸ್ಮರಣೆ ದಿನವನ್ನು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಿಸಲಾಯಿತು. ಪುಷ್ಪಾರ್ಚನೆಯ ಬಳಿಕ ಸಂಸ್ಮರಣಾ ಸಭೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ಏದಾರ್ ಉದ್ಘಾಟಿಸಿದರು. ರಾಘವೇಂದ್ರ ಭಟ್, ಗಂಗಾಧರ ನಾಯ್ಕ್, ಎಡ್ವರ್ಡ್ ಡಿ ಸೋಜ, ಮಹಮ್ಮದ್, ನೌಶಾದ್ ಪಟ್ಲ ಉಪಸ್ಥಿತರಿದ್ದರು. ಶಾಜಿ ಎನ್.ಸಿ. ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.

You cannot copy contents of this page