ತಂದೆಯಿಂದ ಇರಿತ: ಮಗ ಬಲಿ
ಪಾಲಕ್ಕಾಡ್: ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡಿದ ಪುತ್ರನನ್ನು ತಂದೆ ಇರಿದು ಕೊಲೆಗೈದ ಘಟನೆ ನಡೆದಿದೆ. ಪಾಲಕ್ಕಾಡ್ ಸಮೀಪ ಕೊಡುಂತರಪಳ್ಳಿ ನಿವಾಸಿ ಸಿಜಿಲ್ ಎಂಬಾತನನ್ನು ತಂದೆ ಶಿವನ್ ಇರಿದು ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಘಟನೆ ಬಳಿಕ ಶಿವನ್ ತಲೆಮರೆಸಿಕೊಂಡಿದ್ದಾನೆ. ನಿನ್ನೆ ಸಂಜೆ 4 ಗಂಟೆಗೆ ಮದ್ಯ ಸೇವಿಸಿ ಮನೆಗೆ ಬಂದ ಸಿಜಿಲ್ ಜಗಳ ಆರಂಭಿಸಿದ್ದನೆನ್ನಲಾಗಿದೆ. ರಾತ್ರಿ 8.30ರ ವೇಳೆ ಶಿವನ್ನೊಂದಿಗೆ ಮತ್ತೆ ವಾಗ್ವಾದ ನಡೆಸಿದ್ದು, ಈ ವೇಳೆ ಶಿವನ್ ಚಾಕುವಿನಿಂದ ಸಿಜಿಲ್ಗೆ ಇರಿದಿದ್ದಾನೆ ನ್ನಲಾಗಿದೆ.
ಗಾಯಗೊಂಡ ಸಿಜಿಲ್ ನನ್ನು ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ಕೊಲೆಗೀಡಾದ ಸಿಜಿಲ್ ಕಾಪಾ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆನ್ನಲಾಗಿದೆ.