ತಲಕ್ಲಾಯಿ ಕಣ್ಣೋತ್ ಕ್ಷೇತ್ರಗಳ ಆಡಳಿತ ನಿರ್ವಹಣೆ ಪರಿಪಾಲನಾ ಸಮಿತಿಗೆ
ಕಾಸರಗೋಡು: ಹಲವು ವರ್ಷಗಳಿಂದ ಪಾಲಮಂಗಲಂ ಇಲ್ಲಂನವರ ನಿಯಂತ್ರಣದಲ್ಲಿದ್ದ ತಲಕ್ಲಾಯಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಕಣ್ಣೋತ್ ಶ್ರೀ ಮಹಾವಿಷ್ಣು ಕ್ಷೇತ್ರಗಳ ಆಡಳಿತ ನಿರ್ವಹಣೆಯನ್ನು ಟ್ರಸ್ಟಿ ಕುಟುಂಬಗಳು ಸಹಿತ ಒಳಗೊಂಡು ನಾಗರಿಕರ ನೇತೃತ್ವದಲ್ಲಿ ರೂಪೀಕರಿಸಿದ ಪರಿಪಾಲನಾ ಸಮಿತಿ ವಹಿಸಿಕೊಂಡಿದೆ.ಹಲವು ವರ್ಷಗಳ ಇತಿಹಾಸವುಳ್ಳ ಈ ಕ್ಷೇತ್ರಗಳು ಪಾಲಮಂಗಲ ಕುಟುಂಬದ ಹಿರಿಯ ಸದಸ್ಯರು ಟ್ರಸ್ಟಿಗಳಾಗಿ ಪರಿಪಾಲನೆ ನಡೆಸುತ್ತಿದ್ದರು. ಟ್ರಸ್ಟಿ ಕುಟುಂಬಗಳ ಮಧ್ಯೆ ನಡೆದ ಚರ್ಚೆಯಲ್ಲಿ ಈ ಎರಡೂ ಕ್ಷೇತ್ರಗಳ ಮುಂದಿನ ಚಟುವಟಿಕೆಯನ್ನು ಪರಿಪಾಲನಾ ಸಮಿತಿಗೆ ಹಸ್ತಾಂತರಿಸಲಾಗಿದೆ. ಕ್ಷೇತ್ರದ ದಾಖಲೆ ಪತ್ರಗಳು ಮೊದಲಾದವುಗಳನ್ನು ಕ್ಷೇತ್ರ ಟ್ರಸ್ಟಿ ಸದಸ್ಯರು ನಾಗರಿಕರ ಸಮಿತಿಗೆ ಕ್ಷೇತ್ರದಲ್ಲಿ ಹಸ್ತಾಂತರಿಸಿದರು