ತಲ್ಲಾಣಿ: ೯೪ನೇ ಏಕಾಹ ಭಜನೆ ೨೯ರಿಂದ

ಕಾಸರಗೋಡು: ರಾಮರಾಜ ಕ್ಷತ್ರಿಯ ಭಜನಾ ಸಂಘದ 94 ನೇ ವರ್ಷದ ಏಕಾಹ ಭಜನಾ ಸಮಾರಂಭ ಬೇಕಲ ತಲ್ಲಾಣಿ ಶ್ರೀ ಗಣೇಶ ಶಾರದಾ ಮಂದಿರದಲ್ಲಿ ಡಿ.29 ರಿಂದ 31 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಡಿ.29 ರಂದು ಪ್ರಾತ:ಕಾಲ 5.45 ಕ್ಕೆ ಗಣಪತಿ ಹೋಮ, ದೀಪ ಪ್ರತಿಷ್ಠೆ, ಏಕಾಹ ಭಜನೆ ಪ್ರಾರಂಭ, ಪೂರ್ವಾಹ್ನ 11 ರಿಂದ 54 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾ ಯಣ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 6.15 ಕ್ಕೆ ಶ್ರೀ ರಕ್ತೇಶ್ವರಿ ತಂಬಿಲ, ಸಂಜೆ 7 ಕ್ಕೆ ಮಹಾಪೂಜೆ, ರಾತ್ರಿ 8ಕ್ಕೆ ಶ್ರೀ ಗಣೇಶ ಶಾರದಾ ಯುವಶಕ್ತಿಯಿಂದ 33 ನೇ ವರ್ಷದ ಹುಲ್ಪೆ ಸಮರ್ಪಣೆ, 12.30 ಕ್ಕೆ ಮಹಾಪೂಜೆ, 30 ರಂದು ಪ್ರಾತ:ಕಾಲ 5.45 ಕ್ಕೆ ಮಹಾಪೂಜೆ, ಫಲ ವಸ್ತುಗಳ ಹರಾಜು, ಸಂಜೆ 7.30ಕ್ಕೆ ವಾರದ ಭಜನೆ, 31 ರಂದು ಬೆಳಗ್ಗೆ 11ಕ್ಕೆ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page