ದಾಳಿ ಬೆನ್ನಲ್ಲೇ ಉರಿ ಸೆಕ್ಟರ್ನಲ್ಲಿ ಇಬ್ಬರು ಪಾಕ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಶ್ರೀನಗರ: ಪಹಲ್ಗಾಮ್ ಉಗ್ರ ದಾಳಿಯ ಬೆನ್ನಲ್ಲೇ ಭಯೋತ್ಪಾದಕರ ಪತ್ತೆಗಾಗಿ ಜಮ್ಮು ಕಾಶ್ಮೀರದಾದ್ಯಂತ ವ್ಯಾಪಕ ಶೋಧ ಕಾರ್ಯಾ ಚರಣೆ ಆರಂಭಿಸಿರುವಂತೆಯೇ ಬಾರಾಮು ಲ್ಲಾದ ಸೆಕ್ಟರ್ನಲ್ಲಿ ಭಾರತೀಯ ಸೇನೆ, ಇಬ್ಬರು ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದೆ. ಮಾತ್ರವಲ್ಲ ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿದೆ. ಇವರು ನಿಯಂತ್ರಣ ರೇಖೆ (ಎಲ್.ಒ.ಸಿ) ಮೂಲಕ ಭಾರತದೊಳಗೆ ನುಸುಳುವ ಯತ್ನ ನಡೆಸುತ್ತಿದ್ದರೆಂದು ಸೇನೆ ತಿಳಿಸಿದೆ.