ದೆಹಲಿಯಲ್ಲಿ ಬೈಕ್ ಅಪಘಾತ : ಕಾಸರಗೋಡು ನಿವಾಸಿ ಎಸ್ಐ ಮೃತ್ಯು
ಕಾಸರಗೋಡು: ಕಾಸರಗೋಡು ನಿವಾಸಿಯಾದ ಎಸ್ಐಯೊಬ್ಬರು ದೆಹಲಿಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ನಡಕ್ಕಾವ್ ನಿವಾಸಿ ಎನ್.ಕೆ. ಪವಿತ್ರನ್ (೫೮) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಮೊನ್ನೆ ರಾತ್ರಿ ದೆಹಲಿಯಲ್ಲಿ ಬೈಕ್ ಅಪಘಾತ ಸಂಭವಿಸಿದ್ದು, ಇದರಿಂದ ಗಂಭೀರ ಗಾಯಗೊಂಡ ಪವಿತ್ರನ್ರನ್ನು ಅಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಳೆದ ೩೦ ವರ್ಷಗಳಿಂದ ದೆಹಲಿ ಪೊಲೀಸ್ ಇಲಾಖೆಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು. ಮೃತದೇಹವನ್ನು ಇಂದು ಊರಿಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಗುವುದೆಂದು ತಿಳಿದು ಬಂದಿದೆ. ನಡಕ್ಕಾವ್ನ ದಿ| ಕೆ. ಕುಂಞಬು- ದೇವಕಿ ದಂಪತಿಯ ಪುತ್ರನಾದ ಮೃತರು ಪುತ್ರ ಕಶೀಶ್, ಸಹೋದರ – ಸಹೋದರಿಯರಾದ ಜಯದೀಪ್, ಪ್ರೀತ್, ಪ್ರಸೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.