ಧನ್ರಾಜ್ ಪ್ರತಾಪನಗರ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ
ಉಪ್ಪಳ: ಧನ್ರಾಜ್ ಪ್ರತಾಪನಗರ ರವರ ಸ್ಮರಣಾರ್ಥ ಶ್ರೀ ವಿನಾಯಕ ಕಲಾವೃಂದ ಅಶೋಕನಗರ ಅಡ್ಕ ಇವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಆಟಗಾರರನ್ನೊಳಗೊಂಡ ಕಬಡ್ಡಿ ಪಂದ್ಯಾಟ ಅಶೋಕನಗರ ಅಡ್ಕದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ನೇತಾರ ವಿಜಯ ಕುಮಾರ್ ರೈ ಅಧ್ಯಕ್ಷತೆ ವಹಿಸಿದರು. ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿದರು. ಸುಧಾಮ ಗೋಸಾಡ, ಸುಕುಮಾರ ಕುದೆÀ್ರಪ್ಪಾಡಿ ಸಹಿತ ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದರು. ವರದರಾಜ್ ಭಂಡಾರಿ ಸ್ವಾಗತಿಸಿದರು.