ಧಾರ್ಮಿಕ ಮುಂದಾಳು ನಿಧನ

ಉಪ್ಪಳ: ಚೆರುಗೋಳಿ ಕುಳಬೈಲು ನಿವಾಸಿ ಧಾರ್ಮಿಕ ಮುಂದಾಳು, ಕೆ. ಕುಂಞಣ್ಣ ಶೆಟ್ಟಿ (೭೩) ಇಂದು ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನಹೊಂದಿದರು. ಅಂಬಾರು ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷರೂ,ಸದಾಶಿವ ಕಲಾವೃಂದ ಚೆರುಗೋಳಿ ಇದರ ಸ್ಥಾಪಕ ಸದಸ್ಯನಾಗಿದ್ದಾರೆ. ನವ ಮಂಗಳೂರು ಬಂದರು ಮಂಡಳಿಯ ನಿವೃತ್ತ ಉದ್ಯೋಗಿಯಾಗಿರುವ ಇವರು ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತನಾಗಿದ್ದರು. ಇವರ ಪತ್ನಿ ವೇದಾವತಿ ಈ ಹಿಂದೆ ನಿಧನರಾಗಿ ದ್ದಾರೆ. ಮೃತರು ಸಹೋದರ-ಸಹೋದರಿಯರಾದ ಶಿವರಾಮ ಶೆಟ್ಟಿ, ಗೋಪಾಲ ಶೆಟ್ಟಿ, ಸುಮತಿ, ವಾರಿಜ, ರಾಜೀವಿ, ಉಮಾವತಿ,  ಪುಷ್ಪಾವತಿ, ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page