ನಗರದಲ್ಲಿ ಬಿರುಗಾಳಿಗೆ ಮರ ಬಿದ್ದು ಸಾರಿಗೆ ಅಡಚಣೆ

ಕಾಸರಗೋಡು: ತಾಳಿ ಪಡ್ಪು ಬಳಿ ಇಂದು ಮುಂಜಾನೆ ಬೀಸಿದ ಗಾಳಿಗೆ ರಾಷ್ಟ್ರೀಯ ಹೆದ್ದಾರಿ ಬಳಿಯ ಬೃಹತ್ ಮರವೊಂದರ ರೆಂಬೆ ಮುರಿದು ರಸ್ತೆಗೆ ಬಿದ್ದಿದೆ. ಇದರಿಂದ ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದೆ. ವಿಷಯ ತಿಳಿದು ತಕ್ಷಣ ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಮರಗಳನ್ನು ಕಡಿದು ತೆರವುಗೊಳಿಸಿದ್ದಾರೆ.  ಮರ ಬಿದ್ದ ಪರಿಣಾಮ ಅರ್ಧ ತಾಸು ತನಕ ವಾಹನ ಸಂಚಾರ ಹಾಗೂ ವಿದ್ಯುತ್ ವಿತರಣೆ ಮೊಟಕುಗೊಂಡಿತು.

Leave a Reply

Your email address will not be published. Required fields are marked *

You cannot copy content of this page