ನಾಡಿನಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಕಾಸರಗೋಡು: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಇಂದು ನಾಡಿನಾದ್ಯಂತ ವಿವಿಧ ಕಾರ್ಯ ಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ೧೫೩ ಕೇಂದ್ರಗಳಲ್ಲಿ ಬಾಲಗೋಕುಲಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿದೆ. ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ನಡೆಯು ತ್ತಿದೆ. ಕಾಸರಗೋಡು ನಗರ, ಮೊಗ್ರಾ ಲ್ ಪುತ್ತೂರು, ಬೋವಿಕ್ಕಾನ, ಕಾರಡ್ಕ, ಅಡೂರು, ಬದಿಯಡ್ಕ, ಸೂರಂಬೈಲು, ಪರವನಡ್ಕ, ಕೋಳಿ ಯಡ್ಕ, ಮೇಲ್ಪರಂಬ. ಕುಂಡಂಕುಳಿ, ಕುಟ್ಟಿಕ್ಕೋಲ್, ಬಂದಡ್ಕ, ಕಾಞಂಗಾ ಡ್ ಸಹಿತ ವಿವಿಧೆಡೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ.

You cannot copy contents of this page