ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು ಫೋಟೋಗ್ರಾಫರ್ ಮೃತ್ಯು: ಶೋಕತಪ್ತ ಬಜೆ ಪ್ರದೇಶ

ಉಪ್ಪಳ: ಮಂಗಳೂರು ಬಳಿಯ ಕೋಡಿಕಲ್‌ನಲ್ಲಿ ಕಾರು ಹೊಂಡಕ್ಕೆ ಮಗುಚಿ ಮೃತಪm್ಟ ಬಂದ್ಯೋಡು ಸಮೀಪದ ಹೇರೂರು ಬಜೆ ನಿವಾಸಿ ದಿ| ನಾರಾಯಣ ಮಯ್ಯರ ಪುತ್ರ ಪೊಟೋಗ್ರಾಫರ್ ಸೂರ್ಯನಾರಾಯಣ ಮಯ್ಯ (47) ರ ಅಂತ್ಯಕ್ರಿಯೆ ನಿನ್ನೆ ಸಂಜೆ ಮನೆ ಪರಿಸರದಲ್ಲಿ ನಡೆದಿದ್ದು ಸ್ಥಳೀಯರು ಕಣ್ಣೀರ ಕೋಡಿ ಹರಿಸಿದ್ದಾರೆ. ಮಂಗಳೂರು ಪಣಂಬೂರು ಸಮೀಪದ ಶ್ರೀ ನಂದನೇಶ್ವರ ಕ್ಷೇತ್ರದ ಸಭಾಂಗಣದಲ್ಲಿ ಸೀಮಂತ ಕಾರ್ಯಕ್ರಮದ ಪೊಟೋ ತೆಗೆಯಲು ನಿನ್ನೆ ಮುಂಜಾನೆ 5ಗಂಟೆಗೆ ಮನೆಯಿಂದ ತಮ್ಮ ಆಲ್ಟೋಕಾರಿನಲ್ಲಿ ಹೊರಟಿದ್ದರು. ಸುಮಾರು 6ಗಂಟೆ ವೇಳೆ ಕೋಡಿಕಲ್ ನಲ್ಲಿ ವಾಹನಕ್ಕೆ ಸೈಡ್‌ನೀಡುವ ವೇಳೆ ನಿಯಂತ್ರಣ ತಪ್ಪಿ ಕಾರು ಹೊಡಕ್ಕೆ ಮಗುಚಿ ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾ ಗಿದೆ. ಮೃತರು ತಾಯಿ ಯಶೋದ, ಪತ್ನಿ ಗೌರಿ, ಓರ್ವ ಪುತ್ರಿ ಶ್ರೇಯ, ಸಹೋದರರಾದ ಶ್ರೀಕೃಷ್ಣ ಮಯ್ಯ, ಮುರಳೀಧರ ಮಯ್ಯ, ರಾಮಚಂದ್ರ ಮಯ್ಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page