ನಿರ್ಮಾಣ ಕಾರ್ಮಿಕ ನಿಧನ

ಕುಂಬಳೆ: ಬಿಎಂಎಸ್ ಮುಖಂಡ ಕುಂಟಂಗೇರಡ್ಕ ನಿವಾಸಿ, ನಿರ್ಮಾಣ ಕಾರ್ಮಿಕ ನಳಿನಾಕ್ಷ ಗಟ್ಟಿ (೬೪) ನಿಧನ ಹೊಂದಿದರು. ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಬಿಎಂಎಸ್ ಕುಂಬಳೆ ವಲಯ ಮಾಜಿ ಕಾರ್ಯದರ್ಶಿಯಾಗಿ, ನಿರ್ಮಾಣ ಕಾರ್ಮಿಕ ಸಂಘದ ಮಾಜಿ ಜಿಲ್ಲಾ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ಅವಿವಾಹಿತರಾ ಗಿದ್ದಾರೆ. ಮೃತರು ಸಹೋದರರಾದ ವಿಶ್ವನಾಥ, ಬಾಲಕೃಷ್ಣ, ಸಹೋದರಿಯರಾದ ಯಶವಂತಿ, ಸುಂದರಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಮನೆಗೆ ಬಿಎಂಎಸ್ ಕುಂಬಳೆ ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣಮಂಗಲ, ಜಿಲ್ಲಾ ಮುಖಂಡ ಟಿ. ಕೃಷ್ಣನ್ ಭೇಟಿ ನೀಡಿ ಸಂತಾಪ ಸೂಚಿಸಿದರು.

You cannot copy contents of this page