ನಿವೃತ್ತ ಮುಖ್ಯೋಪಾಧ್ಯಾಯಿನಿ ನಿಧನ

ಕಾಸರಗೋಡು: ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಅಧ್ಯಾಪಿಕೆ ಯಾಗಿ, ಮುಖ್ಯೋಪಾಧ್ಯಾಯಿ ನಿಯಾಗಿ ದುಡಿದ, ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಶೀಲ (೭೦) ನಿಧನ ಹೊಂದಿದರು. ಎಡನೀರು, ನೆಟ್ಟಣಿಗೆ, ಪೆರಡಾಲ ಶಾಲೆಗಳಲ್ಲಿ ಅಧ್ಯಾಪಿಕೆಯಾಗಿ, ಆರಿಕ್ಕಾಡಿ, ಅಣಂಗೂರು ಶಾಲೆ ಗಳಲ್ಲಿ ಮುಖ್ಯೋಪಾಧ್ಯಾಯಿನಿ ಯಾಗಿದ್ದರು. ಮೃತರು ಪತಿ ಅಪ್ಪಯ್ಯ ರೈ, ಮಕ್ಕಳಾದ ರಾಜೇಶ್ವರಿ ಚೇತನ್, ಹರಿಪ್ರಸಾದ್ ರೈ, ವಸುಂಧರಾ ಹರೀಶ್, ಅಳಿಯಂದಿರು, ಸೊಸೆ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page