ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು

ಕಣ್ಣೂರು: ಕಡವತ್ತೂರು ಕಲ್ಲಾಚ್ಚೇರಿ ಕಡವು ಸಮೀಪ ಹೊಳೆಯ ನೀರಿಗೆ ಬಿದ್ದು ಯುವಕ ಮೃತಪಟ್ಟನು.  ತೆಕ್ಕಿಲ್ ಮುಹಮ್ಮದ್ (21) ಮೃತಪಟ್ಟ ಯುವಕ. ನಿನ್ನೆ ಸಂಜೆ 6 ಗಂಟೆಗೆ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿದ್ದ ಮಧ್ಯೆ ಸೆಳೆತಕ್ಕೆ ಸಿಲುಕಿ ಅಪಾಯ ಸಂಭವಿಸಿದೆ. ಕೂಡಲೇ ತಲಶ್ಶೇರಿ ಖಾಸಗಿ ಆಸ್ಪತ್ರೆಗೆ ತಲುಪಿಸಿದ ರಾದರೂ ಜೀವ ಉಳಿಸಲು ಸಾಧ್ಯವಾಗ ಲಿಲ್ಲ. ಆಟೋ ಚಾಲಕ ತೆಕ್ಕಿಲ್ ಸಲೀಂ- ಅಫ್ಸ ದಂಪತಿ ಪುತ್ರನಾಗಿದ್ದಾನೆ.

Leave a Reply

Your email address will not be published. Required fields are marked *

You cannot copy content of this page