ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು
ಕಣ್ಣೂರು: ಕಡವತ್ತೂರು ಕಲ್ಲಾಚ್ಚೇರಿ ಕಡವು ಸಮೀಪ ಹೊಳೆಯ ನೀರಿಗೆ ಬಿದ್ದು ಯುವಕ ಮೃತಪಟ್ಟನು. ತೆಕ್ಕಿಲ್ ಮುಹಮ್ಮದ್ (21) ಮೃತಪಟ್ಟ ಯುವಕ. ನಿನ್ನೆ ಸಂಜೆ 6 ಗಂಟೆಗೆ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿದ್ದ ಮಧ್ಯೆ ಸೆಳೆತಕ್ಕೆ ಸಿಲುಕಿ ಅಪಾಯ ಸಂಭವಿಸಿದೆ. ಕೂಡಲೇ ತಲಶ್ಶೇರಿ ಖಾಸಗಿ ಆಸ್ಪತ್ರೆಗೆ ತಲುಪಿಸಿದ ರಾದರೂ ಜೀವ ಉಳಿಸಲು ಸಾಧ್ಯವಾಗ ಲಿಲ್ಲ. ಆಟೋ ಚಾಲಕ ತೆಕ್ಕಿಲ್ ಸಲೀಂ- ಅಫ್ಸ ದಂಪತಿ ಪುತ್ರನಾಗಿದ್ದಾನೆ.