ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿ ವಾರ್ಷಿಕೋತ್ಸವ ೨೮ರಂದು

ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ 44ನೇ ವಾರ್ಷಿಕೋತ್ಸವ ಡಿ.28ರಂದು ಜರಗಲಿದೆ. ಪ್ರಾತಃಕಾಲ ಗಣಪತಿ ಹೋಮ, ದೀಪ ಪ್ರತಿಷ್ಠೆ, ಶ್ರೀ ಗೋಪಾಲಕೃಷ್ಣ ಪೈ ಬದಿಯಡ್ಕ ಅವರಿಂದ ದೀಪಜ್ವಲನೆ, 7.30ರಿಂದ, ಶ್ರೀ ಧರ್ಮಶಾಸ್ತಾ ಭಜನಾ ಸಂಘ, ಮಾತೃಮಂಡಳಿ ಹಾಗೂ ಶ್ರೀ ಕುಮಾರಸ್ವಾಮಿ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ, 10 ಗಂಟೆಗೆ ಶ್ರೀ ಧರ್ಮಶಾಸ್ತಾ ಕುಣಿತ ಭಜನಾ ತಂಡದವರಿAದ ಕುಣಿತ ಭಜನೆ, ವಿಶ್ವನಾಥ ನಾಯ್ಕ ಬಲವಂತಡ್ಕ ಇವರ ಶಿಷ್ಯರ ರಂಗಪ್ರವೇಶ 11.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ಉದಯ ಕುಮಾರ್ ಅಧ್ಯಕ್ಷತೆ ವಹಿಸುವರು. ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಉಪಾಧ್ಯಕ್ಷ ನಿತ್ಯಾನಂದ ನೆಲ್ಲಿತ್ತಲ, ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ ಉಪಸ್ಥಿತರಿರುವರು. ಮಧ್ಯಾಹ್ನ 12.30ಕ್ಕೆ ಶರಣಂ ವಿಳಿ, ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 5 ಗಂಟೆಗೆ ತಾಯಂಬಕ, 6 ಗಂಟೆಗೆ ದೀಪಾರಾಧನೆ, 6.30ರಿಂದ ಓಂಕಾರ ಬಾಲಗೋಕುಲ ರತ್ನಗಿರಿ ಇವರಿಂದ ಭಜನೆ, 7 ಗಂಟೆಗೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿAದ ಹುಲ್ಪೆ ಮೆರವಣಿಗೆ ಹೊರಟು ಮೇಲಿನ ಪೇಟೆಯಾಗಿ ಕುಣಿತ ಭಜನೆ ಹಾಗೂ ಚೆಂಡೆಮೇಳದೊAದಿಗೆ ಶ್ರೀಮಂದಿರಕ್ಕೆ ಆಗಮನ, ರಾತ್ರಿ 7.30ರಿಂದ ಶ್ರೀಮಹಾವಿಷ್ಣು ಭಜನಾ ಸಂಘ ಕಾರ್ಮಾರು, ಶ್ರೀ ಅನ್ನಪೂರ್ಣೇಶ್ವರೀ ಭಜನಾ ಸಂಘ ಕುಂಟಿಕಾನ ಇವರಿಂದ ಭಜನೆ,9.30ಕ್ಕೆ ಶರಣಂ ವಿಳಿ, ಮಹಾಪೂಜೆ, 10 ಗಂಟೆಯಿAದ ಕುಂಟಾಲುಮೂಲೆ ಚಿರಂಜೀವಿ ಯಕ್ಷಗಾನ ಕಲಾಸಂಘ ಉಪ್ಲೇರಿ ಇವರಿಂದ ಯಕ್ಷಗಾನ ಬಯಲಾಟ ಸುದರ್ಶನ ವಿಜಯ ಶ್ವೇತ ಕುಮಾರ ಚರಿತ್ರೆ ಪ್ರದರ್ಶಿಸಲ್ಪಡಲಿದೆ.

Leave a Reply

Your email address will not be published. Required fields are marked *

You cannot copy content of this page