ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆಯಲ್ಲಿ: ಸಮಿತಿ ರೂಪೀಕರಣ ಸಭೆ ನಾಳೆ
ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವ ಸಮಾಲೋಚನೆ ಹಾಗೂ ಸಮಿತಿ ರೂಪೀಕರಣ ಸಭೆ ನಾಳೆ ಅಪರಾಹ್ನ 3 ಗಂಟೆಗೆ ಕ್ಷೇತ್ರ ಪರಿಸರದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಉಪಸ್ಥಿತಿ ಯಲ್ಲಿ ನಡೆಯಲಿದೆ. 2011 ಎಪ್ರಿಲ್ ನಲ್ಲಿ ಕ್ಷೇತ್ರದ ನವೀಕರಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿತ್ತು.
ಇದೀಗ 15 ವರ್ಷಗಳ ಬಳಿಕ 2026 ಎಪ್ರಿಲ್ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ತಂತ್ರಿ ವರ್ಯರ ಉಪಸ್ಥಿತಿಯಲ್ಲಿ ಕ್ಷೇತ್ರ ಆಡಳಿತ ಸಮಿತಿ ತೀರ್ಮಾನಿಸಿದೆ. ಈ ಸಂಬಂಧ ಸವಿಸ್ತಾರವಾಗಿ ಸಮಾಲೋಚಿ ಸಲು ಹಾಗೂ ಅಷ್ಟಬಂಧ ಬ್ರಹ್ಮಕಲಶೋ ತ್ಸವದ ಯಶಸ್ವಿಗೆ ಸಮಿತಿ ರೂಪೀಕರಿ ಸುವ ನಿಟ್ಟಿನಲ್ಲಿ ನಾಳೆ ಕ್ಷೇತ್ರ ಸಮಿತಿ ಸದಸ್ಯರ ಮಹಾಸಭೆ ಹಾಗೂ ಭಗವದ್ಭಕ್ತರ ಸಭೆ ಕರೆಯಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕ್ಷೇತ್ರದ ಟ್ರಸ್ಟ್ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.