ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಷಷ್ಠಿ ಮಹೋತ್ಸವ ನಾಳೆಯಿಂದ

ಕಾಸರಗೋಡು: ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಷಷ್ಠಿ ಮಹೋತ್ಸವ ನಾಳೆಯಿಂದ ೧೮ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ೫.೩೦ಕ್ಕೆ ಗಣಪತಿಹೋಮ, ೯.೩೦ಕ್ಕೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ರಾತ್ರಿ ೭ಕ್ಕೆ ಶ್ರೀ ನಾರಾಯಣ ಮಹಿಳಾ ಸಮಾಜದ ಆಶ್ರಯದಲ್ಲಿ ಹೊರೆಕಾಣಿಕೆ ಸಮರ್ಪಣೆ, ೯.೧೫ಕ್ಕೆ ‘ಕೈಕೊಟ್ಟಿಕಳಿ’, ೯.೩೦ಕ್ಕೆ ನರೇಂದ್ರ ಬಾಲಗೋಕುಲದ ಮಕ್ಕಳಿಂದ ನೃತ್ಯ, ೧೭ರಂದು ಬೆಳಿಗ್ಗೆ ೫.೩೦ಕ್ಕೆ ಗಣಪತಿ ಹೋಮ, ೯.೩೦ಕ್ಕೆ ನವಕಾಭಿಷೇಕ,  ೧೦.೩೦ಕ್ಕೆ  ಆಯಿಲ್ಯಂ ಪೂಜೆ, ನಾಗತಂಬಿಲ, ಪಂಚಮಿ ಉತ್ಸವ, ೧ರಿಂದ ಅನ್ನಸಂತರ್ಪಣೆ, ರಾತ್ರಿ ೯ಕ್ಕೆ ಹುಲ್ಪೆ ಸಮರ್ಪಣೆ, ೯.೧೫ಕ್ಕೆ ನಾರಾಯಣ ಮಹಿಳಾ ಸಮಾಜದ ಆಶ್ರಯದಲ್ಲಿ ನೃತ್ಯ, ೧೮ರಂದು ಬೆಳಿಗ್ಗೆ  ೫.೩೦ಕ್ಕೆ ಗಣಪತಿಹೋಮ, ೧೧ರಿಂದ ಮಹಾಪೂಜೆ, ೧೧.೩೦ಕ್ಕೆ ಷಷ್ಠಿ, ೧ರಿಂದ ಷಷ್ಠಿ ವ್ರತಾ ಧಾರಿಗಳಿಗಿರುವ ಬಲಿವಾಡು, ಅನ್ನಸಂತರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page