ಪಶ್ಚಿಮ ಬಂಗಾಲದಲ್ಲಿ ಸಿಪಿಎಂನೊಂದಿಗೆ ಮೈತ್ರಿ ಬೇಡ, ಏಕಾಂಗಿಯಾಗಿ ಸ್ಪರ್ಧಿಸಬೇಕು- ಕಾಂಗ್ರೆಸ್ ಕೇರಳ ಘಟಕ ಆಗ್ರಹ
ನವದೆಹಲಿ: ಪಶ್ಚಿಮ ಬಂಗಾಲದಲ್ಲಿ ಸಿಪಿಎಂನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದು ಬೇಡವೆಂದೂ, ತನ್ನ ಸ್ವಂತ ಬಲದಲ್ಲೇ ಪಕ್ಷ ಸ್ಪರ್ಧಿಸಬೇಕೆಂದು ಕಾಂಗ್ರೆಸ್ನ ಕೇರಳ ಘಟಕ ಪಕ್ಷದ ಕೇಂದ್ರ ನೇತೃತ್ವ ದೊಂದಿಗೆ ಆಗ್ರಹಿಸಿದೆ. ನವದೆಹಲಿ ಯಲ್ಲಿ ರಾಹುಲ್ ಗಾಂಧಿ ಕರೆದ ಕಾಂಗ್ರೆಸ್ನ ಕೇರಳ ಘಟಕದ ನೇತಾರರ ಸಭೆ ಯಲ್ಲಿ ಪಕ್ಷದ ಕೇರಳ ನೇತಾರರು ಈ ಬೇಡಿಕೆ ಮುಂದಿ ರಿಸಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ಸಿಪಿಎಂನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಲ್ಲಿ ಅದ ಕೇರಳದಲ್ಲಿ ಯುಡಿಎಫ್ಗೆ ಪ್ರತಿಕೂಲಕರವಾಗಿ ಪರಿಣಮಿಸಲಿದೆಯೆಂದು ಕಾಂಗ್ರೆಸ್ನ ಕೇರಳ ಘಟಕದ ಹೆಚ್ಚಿನ ನೇತಾರರು ಅಭಿಪ್ರಾಯಪಡುತ್ತಿದ್ದು, ಅದುವೇ ಪಶ್ಚಿಮ ಬಂಗಾಲದಲ್ಲಿ ಸಿಪಿಎಂನೊಂ ದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊ ಳ್ಳಬಾರದೆಂಬ ಬೇಡಿಕೆಯನ್ನು ರಾಹುಲ್ ಗಾಂಧಿ ಮುಂದಿರಿಸಿರುವುದರ ಪ್ರಧಾನ ಕಾರಣವಾಗಿದ.
ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈತನಕ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಸಮಗ್ರ ಚರ್ಚೆ ನಡೆಸಿದ ಬಳಿಕವಷ್ಟೇ ಈ ವಿಷಯದಲ್ಲಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಈ ವಿಷಯದಲ್ಲಿ ಕಾಂಗ್ರೆಸ್ನ ನಿಲುವು ಏನೆಂಬುವುದನ್ನು ಬಹಿ ರಂಗಪಡಿಸಲಿ ಎಂದು ಇದೇ ಸಂದರ್ಭದಲ್ಲಿ ಸಿಪಿಎಂ ಹೇಳಿದೆ. ಈ ವಿಷಯ ದಲ್ಲಿ ಕಾಂಗ್ರೆಸ್ ಹೈಕಮಾಂಡ್ನ ಸ್ಪಷ್ಟ ನಿಲುವು ಹೊರಬಂದ ಬಳಿಕವಷ್ಟೇ ಆ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದೆಂದು ಸಿಪಿಎಂ ಹೇಳಿದೆ.
ಪಶ್ಚಿಮ ಬಂಗಾಲದಲ್ಲಿ ಕಾಂಗ್ರೆಸ್ ಸಿಪಿಎಂನೊಂದಿಗೆ ಮೈತ್ರಿ ಮಾಡಿ ಕೊಂಡಲ್ಲಿ ಅದನ್ನು ಪ್ರಧಾನ ಪ್ರಚಾರ ಅಸ್ತ್ರವನ್ನಾಗಿಸಿ ಬಿಜೆಪಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ವಿರುದ್ಧ ಮಾತ್ರವಲ್ಲ ಎಡರಂಗದ ವಿರುದ್ಧವೂ ಪ್ರಯೋ ಗಿಸಲಿದೆ. ಹಾಗೆ ನಡೆದಲ್ಲಿ ಅದು ಯುಡಿಎಫ್ ಮತ್ತು ಎಡರಂಗವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆಯೂ ಮಾಡಲಿದೆ. ಆದ್ದರಿಂದ ಈ ವಿಷಯದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಅತ್ಯಂತ ಜಾಗ್ರತೆ ಪಾಲಿಸತೊಡಗಿದೆ.