ಪೆರ್ವತ್ತೋಡಿಗುತ್ತು ದೈವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನೇಮೋತ್ಸವ 22ರಿಂದ


ಬೆಳ್ಳೂರು: ಪೆರ್ವತ್ತೋಡಿಗುತ್ತು ಶ್ರೀ ಧೂಮಾವತಿ ಮತ್ತು ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಈ ತಿಂಗಳ 22ರಿಂದ 25ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದೇ ಸಮಯದಲ್ಲಿ ದೈವನೇಮ ನಡೆಯಲಿದೆ. 22ರಂದು ಸಂಜೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ರಾತ್ರಿ 7ರಿಂದ ವಿವಿಧ ವೈದಿಕ ಕಾರ್ಯಕ್ರಮ, 23ರಂದು ಮುಂಜಾನೆ 5ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 7.24ಕ್ಕೆ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, 10ರಿಂದ ನಾಗ ತಂಬಿಲ ಜರಗಲಿದೆ. 11 ಗಂಟೆಗೆ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಶಶಾಂಕ್ ನೆಲ್ಲಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಹರಿಸೇವೆ, ರಾತ್ರಿ 8ಕ್ಕೆ ಮಂಟಮೆ ಬಳ್ಳಿಗೆ ಭಂಡಾರ ಏರುವುದು, 8.30ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮಿಯವರ ಶಿಷ್ಯವೃಂದದವರಿAದ ನೃತ್ಯ ವೈಭವ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, 11.30ರಿಂದ ಎ.ಬಿ. ಮಧುಸೂದನ ಬಲ್ಲಾಳ್ ನಿರ್ದೇಶನದಲ್ಲಿ ಅಭಿನಯ ಕಲಾ ತಂಡದವರಿAದ ‘ಘಳಿಗೆ ತತ್ತ್ಂಡ ಗುಳಿಗೆ ಬುಡಯೆ’ ನಾಟಕ ಪ್ರದರ್ಶನಗೊಳ್ಳಲಿದೆ.
24ರಂದು ಬೆಳಿಗ್ಗೆ 8ಕ್ಕೆ ಕಲ್ಲಂಡ ಧೂಮಾವತಿ, ಪರಿವಾರ ದೈವಗಳ ನೇಮ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ 7ಕ್ಕೆ ಕುಂಬ್ಡಾಜೆ ಬೀಡಿನಿಂದ ಪೆರ್ವತ್ತೋಡಿಗುತ್ತು ದೈವಸ್ಥಾನಕ್ಕೆ ಭಂಡಾರ ಆಗಮನ, 8ರಿಂದ ನೃತ್ಯ ಭಜನೆ, ಬಳಿಕ ಕೊರತಿ ದೈವದ ಕೋಲ, ಅನ್ನ ಸಂತರ್ಪಣೆ, ಪೊಟ್ಟನ್ ದೈವದ ಕೋಲ, 25ರಂದು ಬೆಳಿಗ್ಗೆ 8ರಿಂದ ಶ್ರೀ ರಕ್ತೇಶ್ವರಿ ದೈವ, 11ರಿಂದ ಶ್ರೀ ಧೂಮಾವತಿ ದೈವ, ಅಪರಾಹ್ನ 3ರಿಂದ ಶ್ರೀ ಪಡ್ಡೈ ಧೂಮಾವತಿ ಮತ್ತು ಉಪ ದೈವಗಳ ಕೋಲ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page