ಪೊಲೀಸ್ ಠಾಣೆ ಮುಂದೆ ಲೀಗ್ ಧರಣಿ ಆರಂಭ

ಕುಂಬಳೆ: ಮುಹಮ್ಮದ್ ಫರ್ಹಾಸ್‌ನ ಸಾವಿಗೆ ಕಾರಣ ಕರ್ತರಾದ ಪೊಲೀಸರ ವಿರುದ್ಧ ಕೊಲೆಕೃತ್ಯಕ್ಕೆ ಕೇಸು

ದಾಖಲಿಸಬೇಕೆಂದು ಒತ್ತಾಯಿಸಿ ಕುಂಬಳೆ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಲೀಗ್ ನೇತೃತ್ವದಲ್ಲಿ ಧರಣಿ ಆರಂಭಿಸಲಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಎಕೆಎಂ. ಅಶ್ರಫ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಅಸೀಸ್ ಮರಿಕ್ಕೆ ಅಧ್ಯಕ್ಷತೆ ವಹಿಸಿದರು. ಮಂಡಲ ಕಾರ್ಯದರ್ಶಿ ಎ.ಕೆ. ಹಾರಿಫ್ ಸ್ವಾಗತಿಸಿದರು. ಧರಣಿಯಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಭಾಗವಹಿಸುತ್ತಿದ್ದಾರೆ.

You cannot copy contents of this page