ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಜಿಲ್ಲೆಗಳಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ
ತಿರುವನಂತಪುರ: ಜಡಿ ಮಳೆಯಿಂದ ಪ್ರಾಕೃತಿಕ ವಿಕೋಪ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳಿಗಾಗಿ ರಾಜ್ಯ ಸರಕಾರ ತಲಾ ಒಂದು ಕೋಟಿ ರೂ. ಬಿಡುಗಡೆಗೊಳಿಸಿದೆ.
ಇದರಂತೆ ವಿಪತ್ತು ನಿರ್ವಹಣಾ ನಿಧಿಯಿಂದ ಈ ಹಣ ವಿನಿಯೋಗಿ ಸಲು ಸರಕಾರ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ. ಅನಿವಾರ್ಯ ಸಂದರ್ಭದಲ್ಲಿ 25ಲಕ್ಷರೂ. ವಿನಿಯೋಗಿಸುವ ಅನುಮತಿ ನೀಡಲಾಗಿದೆ. ಇದರ ಹೊರತಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೂ ಸರಕಾರ ಹಣ ಬಿಡುಗಡೆಗೊಳಿಸಿದೆ. ಇದರಂತೆ ಕಾರ್ಪೋರೇಶನ್ಗಳು ಗರಿಷ್ಠ ಐದು ಲಕ್ಷ ರೂ. , ನಗರಸಭೆಗಳು ಮೂರು ಲಕ್ಷ ಹಾಗೂ ಗ್ರಾಮ ಪಂಚಾಯತ್ ಗಳು ಒಂದು ಲಕ್ಷ ರೂ. ಇದಕ್ಕಾಗಿ ವಿನಿಯೋಗಿಸಬಹುದಾಗಿದೆ.