ಪ್ರಿಯತಮೆಯ ಕೊಲೆಯ ಬಳಿಕ ನೇಣು ಬಿಗಿದು ಯುವಕ ಆತ್ಮಹತ್ಯೆ
ಚಿಕ್ಕಮಗಳೂರು: ಪ್ರಿಯತಮೆ ಯನ್ನು ಕಾರಿನೊಳಗೆ ಕತ್ತುಹಿಸುಕಿ ಕೊಲೆಗೈದ ಬಳಿಕ ಪ್ರಿಯತಮ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಲ್ಲಿಗೆ ಸಮೀಪದ ದಾಸರಹಳ್ಳಿಯಲ್ಲಿ ನಡೆದಿದೆ. ಶಿವಮೊಗ್ಗ ಭದ್ರಾವತಿ ನಿವಾಸಿ ಕಾರು ಚಾಲಕ ಮಧು (30) ಹಾಗೂ ಗೆಳತಿ ಮಾಗಡಿಯ ಪೂರ್ಣಿಮ (28) ಎಂಬಿವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದವರು. ನಿನ್ನೆ ಬೆಳಿಗ್ಗೆ ದಾಸರಹಳ್ಳಿಯ ಒಂದು ಕಾಪಿ ತೋಟದ ಬಳಿ ಇವರ ಮೃತದೇಹ ಗಳನ್ನು ಸ್ಥಳೀಯರು ಪತ್ತೆಹಚ್ಚಿದ್ದರು.