ಬಂಡೆಕಲ್ಲು ಸಹಿತ ಗುಡ್ಡೆ ಕುಸಿತ: ನಿರ್ಮಾಣ ಹಂತದ ಮನೆಗೆ  ಹಾನಿ

ಪುತ್ತಿಗೆ: ನಿನ್ನೆ ಸುರಿದ ಧಾರಾಕಾರ ಮಳೆ ವೇಳೆ ಗುಡ್ಡೆಯೊಂದು ಕುಸಿದುಬಿದ್ದು ನಿರ್ಮಾಣ ಹಂತದ ಮನೆಗೆ ವ್ಯಾಪಕ ನಾಶ ಸಂಭವಿಸಿದೆ.

ಬಾಡೂರು ನಾಟೆಕಲ್ಲು ಎಂಬಲ್ಲಿ ನಿನ್ನೆ ಅಪರಾಹ್ನ ೨ ಗಂಟೆಗೆ ಈ ಘಟನೆ ನಡೆದಿದೆ. ಅಂಗಡಿಮೊಗರು ದೇಲಂಪಾಡಿಯ ಫ್ರಾನ್ಸಿಸ್ ಕ್ರಾಸ್ತಾರ ಮನೆ ಅಪಾಯಕ್ಕೀಡಾಗಿದೆ. ನಿನ್ನೆ ಧಾರಾಕಾರ ಮಳೆ ಸುರಿಯುತ್ತಿದ್ದಂತೆ ಸಮೀಪದ ಗುಡ್ಡೆ ಕುಸಿದು ಮನೆ ಮೇಲೆ ಬಿದ್ದಿದೆ.

ಭಾರೀ ಗಾತ್ರದ ಬಂಡೆಕಲ್ಲು ಸಹಿತ ಮಣ್ಣು ಕುಸಿದುಬಿದು ಪರಿಣಾಮ ಮನೆಗೆ  ಹಾನಿಯುಂಟಾಗಿದೆ. ಇದರಿಂದ ಭಾರೀ ನಾಶನಷ್ಟ ಉಂಟಾಗಿದೆ. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

RELATED NEWS

You cannot copy contents of this page