ಬಸ್‌ನಿಂದ ಹೊರಕ್ಕೆಸೆಯಲ್ಪಟ್ಟು ವಿದ್ಯಾರ್ಥಿಗೆ ಗಾಯ

ಕುಂಬಳೆ:  ಬಸ್‌ನ ಬಾಗಿಲು ತೆರೆದು ಹೊರಕ್ಕೆ ಎಸೆಯಲ್ಪಟ್ಟು  ವಿದ್ಯಾರ್ಥಿ ಗಾಯಗೊಂಡ ಘಟನೆ ನಡೆದಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಆರಿಕ್ಕಾಡಿಯ ಮುಹಮ್ಮದ್ ಮುಫೀದ್ (೧೪) ಎಂಬಾತ ಗಾಯಗೊಂಡಿದ್ದಾನೆ. ಆರಿಕ್ಕಾಡಿಯಲ್ಲಿ ನಿನ್ನೆ ಈ ಅಪಘಾತ ಸಂಭವಿಸಿದೆ. ಈತನನ್ನು ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಿಟಿಎ ಅಧ್ಯಕ್ಷ ಎ.ಕೆ. ಆರಿಫ್, ಎಂಪಿಟಿಎ ಅಧ್ಯಕ್ಷೆ ವಿನೀಶ, ಸ್ಟಾಫ್ ಸೆಕ್ರೆಟರಿ ದಿನೇಶ್ ಕುಂಬಳೆ ಎಂಬಿವರು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಯನ್ನು ಸಂದರ್ಶಿಸಿದರು.

RELATED NEWS

You cannot copy contents of this page