ಬಸ್ ಸ್ಕೂಟರ್ ಢಿಕ್ಕಿ: ಯುವಕ ದಾರುಣ ಮೃತ್ಯು

 ಬೋವಿಕ್ಕಾನ: ಖಾಸಗಿ ಸ್ ಮತ್ತು ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರನಾದ ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೋವಿಕ್ಕಾನ ಬಳಿ ನಿನ್ನೆ ನಡೆದಿದೆ.

ಪಡನ್ನಕ್ಕೆ ಸಮೀಪದ ಕೊನ್ನಕ್ಕಾಡ್ ಅಶೋಕಚ್ಚಾಲಿನ ಕಳತ್ತುವಾದುಕಲ್ ಶರತ್ ದಾಮೋದರನ್ (೨೬) ಸಾವನ್ನಪ್ಪಿದ ದುರ್ದೈವಿ. ಬೋವಿಕ್ಕಾನ-ಕಾನತ್ತೂರು ರಸ್ತೆಯ ಚಿಪ್ಲಿಕಯ ಭಜನಾ ಮಂದಿರ ಬಳಿ ಈ ಅಫಘಾತ ಸಂಭವಿಸಿದೆ.  ಕಾಸರಗೋಡಿನಿಂದ ಕುತ್ತಿಕ್ಕೋಲ್‌ಗೆ ಸಂಚರಿಸುತ್ತಿದ್ದ ಬಸ್ ಮತ್ತು ಶರತ್ ಚಲಾಯಿಸುತ್ತಿದ್ದ ಸ್ಕೂಟರ್ ಪರಸ್ಪರ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಶರತ್‌ನನ್ನು ಊರವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಅಪಘಾತದ ಆಘಾತಕ್ಕೆ ಸ್ಕೂಟರ್ ಸಂಪೂರ್ಣ ವಾಗಿ ನಜ್ಜುಗುಜ್ಜಾಗಿದೆ. ಬಸ್ಸಿನ ಒಂದು ಭಾಗವೂ ಹಾನಿಗೊಂಡಿದೆ. ಆದೂರು ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ದರು. ಮೃತದೇಹವನ್ನು ಕಾಸರಗೋ ಡು ಜನರಲ್ ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆಗೊಳಪಡಿಸ ಲಾಯಿತು. ?ಕಳತ್ತುವಾದುಕಲ್ ದಾಮೋದರನ್-ಶಶಿಕಲಾ ದಂಪತಿ ಪುತ್ರನಾಗಿರುವ ಶರತ್ ಸಹೋದರಿ ದರ್ಶನ,ಸಹೋದರ ಆದರ್ಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page