ಬಿರುಸಾಗುತ್ತಿರುವ ಮಳೆ : ಸಾರ್ವಜನಿಕರಿಗೆ ನಿರ್ದೇಶಗಳು

ಕಾಸರಗೋಡು: ತೀವ್ರ ಮಳೆ ಲಭಿಸುತ್ತಿರುವ ಮಲೆನಾಡು ವಲಯದಲ್ಲಿ ಮಣ್ಣು ಕುಸಿತ, ಗುಡ್ಡೆ ಕುಸಿತ, ನೆರೆ ಸಾಧ್ಯತೆ ಇರುವ ಪ್ರದೇಶಗಳಲ್ಲಿರುವವರು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರ ಗೊಂಡು ವಾಸಮಾಡಬೇಕಾಗಿದೆ. ಹಗಲು ಹೊತ್ತಿನಲ್ಲಿಯೇ ಸ್ಥಳಾಂತರಗೊಳ್ಳ ಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕೇಂದ್ರ ಹವಾಮಾನ ಇಲಾಖೆ ನೀಡಿದ ಮುನ್ನೆಚ್ಚರಿಕೆ ಕ್ರಮದಂಗವಾಗಿ ಅಧಿಕಾರಿಗಳು ಈ ಎಚ್ಚರಿಗೆ ನೀಡಿದ್ದಾರೆ. ಸ್ಥಿರವಾಗಿ ನೀರು ಸಂಗ್ರಹವಾಗುತ್ತಿರುವ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಶಿಬಿರಗಳಿಗೆ ಸ್ಥಳಾಂತರವಾಗಬೇಕು. ತೀವ್ರವಾದ ಗಾಳಿಗೆ ಸಾಧ್ಯತೆ ಇರುವ ಕಾರಣ ಗಟ್ಟಿ ಮುಟ್ಟಾಗಿಲ್ಲದ ಮನೆಗಳಲ್ಲಿ  ವಾಸಿಸುವ ವರು, ಛಾವಣಿಯಿಲ್ಲದ  ಮನೆಗಳಲ್ಲಿ ವಾಸಿಸುವವರು ಪ್ರತ್ಯೇಕ ಜಾಗ್ರತೆ ವಹಿಸಬೇಕು. ಇವರೆಲ್ಲ ಸುರಕ್ಷಿತತೆಯ ದೃಷ್ಟಿಯಿಂದ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರವಾಗ ಬೇಕು. ಖಾಸಗಿ-ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕರ ವಾದ ರೀತಿಯಲ್ಲಿ ಮರಗಳು, ಪೋಸ್ಟ್‌ಗಳು, ಬೋರ್ಡ್ ಗಳು, ಆವರಣ ಗೋಡೆಗಳನ್ನು ಸುರಕ್ಷಿತವಾ ಗಿರಿಸಬೇಕಾಗಿದ್ದು, ಅಪಾಯಕರ ಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಬೇಕಾಗಿದೆ. ನದಿಯಲ್ಲಿ ನೀರು ಹೆಚ್ಚಾಗಿರುವ ಕಾರಣ ಯಾವುದೇ ಕಾರಣದಿಂದಲೂ ನದಿಯನ್ನು ದಾಟಬಾರದು. ಸ್ನಾನ ಮಾಡಲು, ಮೀನು ಹಿಡಿಯಲು, ಇತರ ಅಗತ್ಯಗಳಿಗೆ ನದಿಗಳಿಗೆ ಇಳಿಯಬಾರದು.

ಅತ್ಯಗತ್ಯ ಪ್ರಯಾಣವನ್ನು ಹೊರತುಪಡಿಸಿ ಇತರ ಯಾತ್ರೆಗಳನ್ನು ಮೊಟಕುಗೊಳಿಸಬೇಕು. ಪ್ರವಾಸವನ್ನು ಮುಂದೂಡಬೇಕು. ದುರಸ್ತಿ ನಡೆಯುತ್ತಿರುವ ರಸ್ತೆಗಳಲ್ಲಿ ಸಂಚಾರ ಜಾಗರೂಕತೆಯಿಂದಾಗಿರಬೇಕೆಂದು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page