ಬೀದಿನಾಯಿ ಕಚ್ಚಿ ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತ್ಯು
ಕಲ್ಲಿಕೋಟೆ: ಬೀದಿ ನಾಯಿ ಕಚ್ಚಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತಪಟ್ಟಳು. ಮಲಪ್ಪುರಂ ಪೆರುವಣ್ಣೂರು ಕಾಕತ್ತಡ ನಿವಾಸಿ ಫಾರಿಸ್ ನಿಧನಹೊಂದಿದ ಬಾಲಕಿ. ಇಲ್ಲಿನ ಸಲ್ಮಾನುಲ್ ಫಾರಿಸ್ರ ಪುತ್ರಿಯಾಗಿದ್ದಾಳೆ. ಮಾರ್ಚ್ 23ರಂದು ಮಿಠಾಯಿ ಖರೀದಿಸಲೆಂದು ತೆರಳಿದ್ದ ಬಾಲಕಿಗೆ ತಲೆಗೆ ಹಾಗೂ ಕಾಲಿಗೆ ನಾಯಿಕಚ್ಚಿ ಗಾಯಗೊಳಿಸಿತ್ತು. ತಲೆಗೆ ಆಳದಲ್ಲಿ ಉಂಟಾದ ಸಾವಿಗೆ ಕಾರಣವೆಂದು ವೈದ್ಯರು ತಿಳಿಸಿದ್ದಾರೆ. ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ಮೂರು ಡೋಸ್ ವ್ಯಾಕ್ಸಿನ್ ನೀಡಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.