ಭ್ರಷ್ಟಾಚಾರ, ದುಂದುವೆಚ್ಚದ ಸರಕಾರ ಮುಖ್ಯಮಂತ್ರಿ ರಾಜೀನಾಮೆಗೆ ಕಾಂಗ್ರೆಸ್ ಮಾರ್ಚ್
ಕಾಸರಗೋಡು: ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇ ಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಲೆಕ್ಟ್ರೇಟ್ಗೆ ಬಹುಜನ ಮಾರ್ಚ್ ನಡೆಸಲಾಯಿತು. ಮುಖ್ಯಮಂತ್ರಿ ಭ್ರಷ್ಟಾಚಾರ ನಡೆಸಿ ಅದರ ಹೆಸರಲ್ಲಿ ಪ್ರತಿಫಲವಾಗಿ ಪುತ್ರಿಯ ಬ್ಯಾಂಕ್ ಖಾತೆಗೆ ಲಕ್ಷಾಂತರ ಠೇವಣಿ ಸಂಗ್ರಹವಾಗುವ ಮಾಯಾಜಾಲ ಆಡಳಿತವಾಗಿದೆ ಕೇರಳದಲ್ಲಿ ನಡೆಯುತ್ತಿರುವುದು. ಇತಿಹಾಸದಲ್ಲೇ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆಯುವ ರಾಜ್ಯವಾಗಿ ಕೇರಳವನ್ನು ಬದಲಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸೋನಿ ಸೆಬಾಸ್ಟಿಯನ್ ನುಡಿದರು. ಪಿಣರಾಯಿ ವಿಜಯನ್ರ ೯ ವರ್ಷದ ಆಡಳಿತದಿಂದ ಕೇರಳ ಪಾತಾಳಕ್ಕೆ ತಲುಪಿದ್ದು, ಉಮ್ಮನ್ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ ಮಾರಕವಾದ ರೋಗಗಳಿಂದ ಕಷ್ಟಪಡುತ್ತಿದ್ದವರಿಗೆ, ಪ್ರಧಾನ ಆಸ್ಪತ್ರೆಗಳಿಂದ ಉಚಿತ ಚಿಕಿತ್ಸೆ ಸೌಕರ್ಯ ಮಾಡಿಕೊಟ್ಟು ಜನರಿಗೆ ನೆರವಾಗಿದ್ದರು. ಈಗ ಸಾವಿರಾರು ರೋಗಿಗಳು ಆಶ್ರಯಿಸುವ ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ಬೆಂಕಿ ದುರಂತ ಉಂಟಾಗಿ ರೋಗಿಗಳು ಸಂಕಷ್ಟಪಡುವ, ಸಾಯುವ ಸ್ಥಿತಿ ಉಂಟಾಗಿದೆ ಎಂದು ಅವರು ಆಪಾದಿಸಿದರು.
ಮದ್ಯದ ಹಾಗೂ ಮಾದಕ ಪದಾರ್ಥಗಳ ಮಧ್ಯೆ ಸಿಲುಕಿ ವಿದ್ಯಾರ್ಥಿಗಳು, ಯುವಕರು ವಿಹರಿಸುತ್ತಿರುವಾಗ ಏನನ್ನೂ ಮಾಡದೆ ಸರಕಾರ ಕೈಕಟ್ಟಿ ಕುಳಿತಿದೆ ಎಂದು ಅವರು ದೂರಿದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ನಡೆದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾನಗರ-ಮಧೂರು ರಸ್ತೆಯಿಂದ ಆರಂಭಿಸಿದ ಮಾರ್ಚ್ನಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಹಕೀಂ ಕುನ್ನಿಲ್, ಎ. ಗೋವಿಂದನ್ ನಾಯರ್, ನೀಲಕಂಠನ್, ಎಂ. ಹಸೈನಾರ್ ಸಹಿತ ಹಲವರು ಭಾಗವಹಿಸಿದರು.