ಮಂಗಳೂರಿನಿಂದ ತಿರುವನಂತಪುರ ತನಕದ ರೂಟಿನಲ್ಲಿ  ರೈಲುಗಳ ವೇಗ ಮಿತಿ೧೬೦ ಕಿ.ಮೀ.ಗೇರಿಸುವ ಸಮೀಕ್ಷೆ ಪೂರ್ಣ

ಕಾಸರಗೋಡು: ಮಂಗಳೂರಿನಿಂದ ತಿರುವನಂತಪುರ ತನಕದ ರೈಲ್ವೇ ಹಳಿಯಲ್ಲಿ ರೈಲುಗಳ ವೇಗ ಮಿತಿಯನ್ನು ೧೬೦ ಕಿ.ಮೀಗೇರಿಸುವ ಉದ್ದೇಶದಿಂದ ಆರಂಭಿಸಲಾದ ಸರ್ವೇ ಪೂರ್ಣಗೊಂಡಿದೆ.

ಹೆಲಿಕಾಫ್ಟರ್ ಬಳಸಿ ಲೈಟ್ ಡಿಜೆಕ್ಷನ್ ಆಂಡ್  ರೇಂಜಿಂಗ್ (ಲೀಡಾರ್) ಸೌಕರ್ಯ ಬಳಸಿ ಸಮೀಕ್ಷೆ ನಡೆಸಲಾಗಿದೆ. ರೈಲ್ವೇಗಾಗಿ ಹೈದರಾಬಾದ್‌ನ ಆರ್ವಿ ಅಸೋಸಿಯೇಟ್ಸ್ ಈ ಸಮೀಕ್ಷೆ ನಡೆಸಿದೆ.    ಸಮೀಕ್ಷೆಯನ್ನು ಪರಿಶೀಲಿಸಿ ಮಂಗಳೂರಿನಿಂದ ತಿರುವನಂತಪುರ ತನಕದ ರೈಲು ದಾರಿಯಲ್ಲಿರುವ  ತಿರುವು ಪ್ರದೇಶಗಳ ಹಳಿಗಳನ್ನು ಬದಲಾಯಿಸಿ ಅವುಗಳನ್ನು ನೇರಗೊಳಿಸಲಾಗುವುದು. ಮಾತ್ರವಲ್ಲ ಅಗತ್ಯದ ಇತರ ಬದಲಾವಣೆಗಳನ್ನು ತರಲಾಗುವುದು. ಲೀಡಾರ್ ಸರ್ವೇಗಾಗಿ ಹೆಲಿಟಾಕ್ಸಿ ಸರ್ವೇಯನ್ನು   ತುಂಬಿ ಅವಿಯೇಶನ್‌ನ ವಿಟಿ-ಕೆ.ಎಸ್.ಎ ಹೆಲಿಕಾಫ್ಟರ್ ಉಪಯೋಗಿ ಸಲಾಗಿತ್ತು. ಸಮೀಕ್ಷೆಯ ವರದಿಯನ್ನು ಶೀಘ್ರ ರೈಲ್ವೇ ಇಲಾಖೆಗೆ ಸಲ್ಲಿಸಲಾಗುವುದು. ತಿರುವು ರೈಲ್ವೇ ಹಳಿಗಳನ್ನು ನೇರವಾಗಿಸಲು ಅಗತ್ಯದ  ಭೂ ಸ್ವಾಧೀನ ಕ್ರಮವನ್ನು ಶೀಘ್ರ ಆರಂಭಿಸಲಾಗುವುದು.

ಕೇರಳದ ರೈಲು ಹಳಿಗಳನ್ನು ನವೀಕರಿಸಿ ಯೋಜನೆಯನ್ನು ಐದು ವರ್ಷದೊಳಗೆ ಪೂರ್ತೀಕರಿಸಲು ರೈಲ್ವೇ ಇಲಾಖೆ ತೀರ್ಮಾನಿಸಿದೆ.

Leave a Reply

Your email address will not be published. Required fields are marked *

You cannot copy content of this page