ಮಣ್ಣಂಗುಳಿ ಮೈದಾನ ಪರಿಸರದಲ್ಲಿ ತ್ಯಾಜ್ಯಗಳ ರಾಶಿ: ದುರ್ವಾಸನೆಯಿಂದ ಸಮಸ್ಯೆ
ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ಹಾಗೂ ಇಲ್ಲಿನ ಅಂಗನ ವಾಡಿ ಕಟ್ಟಡ ಪರಿಸರದಲ್ಲಿ ತ್ಯಾಜ್ಯ ರಾಶಿಯಿಂದ ಸ್ಥಳೀಯರು ಸಹಿತ ಸಾರ್ವಜನಿಕರು ಸಮಸ್ಯೆಗೀ ಡಾಗಿದ್ದು, ಆತಂಕಗೊAಡಿದ್ದಾರೆ. ಕೋಡಿಬೈಲ್ ರಸ್ತೆ, ಮೈದಾನ ಸುತ್ತಲು ಅಲ್ಲದೆ ಈ ಪರಿಸರದಲ್ಲಿ ನೂತನವಾಗಿ ನಿರ್ಮಿಸಿ ಉದ್ಘಾಟನೆಗೆ ಮೀನ-ಮೇಷ ಎಣಿಸು ತ್ತಿರುವ ಅಂಗನವಾಡಿ ಕಟ್ಟಡದ ಬಳಿ ಯಲ್ಲಿ ತ್ಯಾಜ್ಯಗಳ ರಾಶಿ ಕಂಡುಬರು ತ್ತಿದೆ. ತ್ಯಾಜ್ಯಗಳನ್ನು ಇಲ್ಲಿ ಉರಿಸ ಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ವರ್ಷಗಳಿಂದಲೂ ಈ ಪರಿಸರದಲ್ಲಿ ತ್ಯಾಜ್ಯ ರಾಶಿ ಕಂಡು ಬರುತ್ತಿದ್ದರೂ ಶುಚೀಕರಣಕ್ಕೆ ಕ್ರಮ ಕೈಗೊಳ್ಳದೆ ಇರುವುದು ಸಾರ್ವ ಜನಿಕರಲ್ಲಿ ಆಕ್ರೋಶಕ್ಕೂ ಕಾರಣವಾ ಗಿದೆ. ಮಳೆಗಾಲದಲ್ಲಿ ಕೊಳೆತು ಸಾಂಕ್ರಾಮಿಕ ರೋಗ ಹರಡಲೂ ಕಾರಣವಾಗಬ ಹುದಾಗಿದೆ. ವಿವಿಧ ಕಡೆಗಳಿಂದ ತ್ಯಾಜ್ಯ ಗಳನ್ನು ತಂದು ಉಪೇಕ್ಷಿಸಲಾಗುತ್ತಿದೆ. ಪಂಚಾಯತ್ ಅಧಿಕಾರಿಗಳು ಕೂಡಲೇ ಈ ಪರಿಸರ ವನ್ನು ಶುಚೀಕರಣ ಗೊಳಿಸಿ, ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.