ಮನೆಯಿಂದ ೧.೭೫ ಲಕ್ಷ ರೂ. ಮೌಲ್ಯದ ಅಡಿಕೆ ಕಳವು: ಇಬ್ಬರ ಸೆರೆ

ಮಂಜೇಶ್ವರ: ಮನೆಗೆ ಕಳ್ಳರು ನುಗ್ಗಿ ೧,೭೫,೦೦೦ ರೂ. ಮೌಲ್ಯದ ಆರು ಗೋಣಿ ಚೀಲಗಳಲ್ಲಿ ತುಂಬಿಸಿಡ ಲಾಗಿದ್ದ ಅಡಿಕೆ ಕಳವುಗೈದಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಾಂಪೌಂಡ್‌ನ ರೆಹ್ಮಾನ್ ಸಹೀಂ ಎಂಬವರು  ಈ ಬಗ್ಗೆ ದೂರು ನೀಡಿದ್ದು ಅದರಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆಪ್ಟಂಬರ್ ೫ಮತ್ತು ೬ರ ನಡುವಿನ  ಸಮಯದಲ್ಲಿ ಕಳ್ಳರು ತಮ್ಮ ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿ ಕೊಠಡಿಯೊಳಗಿರಿಸಲಾಗಿದ್ದ ಅಡಿಕೆ ಕಳವಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ರೆಹ್ಮಾನ್ ಸಹೀಂ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ನಿಖಿಲ್ ಇಬ್ಬರನ್ನು ಬಂಧಿಸಿದ್ದಾರೆ. ಕಡಂಬಾರು   ಇಡಿಯಾ ನಿವಾಸಿ ಮುಸ್ತಾಕ್ ಹುಸೈನ್ (೨೨) ಮತ್ತು ಕಾಜೂರು ನಿವಾಸಿ ಅಬ್ದುಲ್ ರಶೀದ್ (೨೧) ಬಂಧಿತರಾದ ಆರೋಪಿಗಳಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page