ಮನೆಯಿಂದ 9 ಪವನ್ ಚಿನ್ನಾಭರಣ, 85 ಸಾವಿರ ರೂ. ಕಳವು
ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಬ್ರಾಣದಲ್ಲಿ ಮನೆಯೊಂದರಿಂದ ಚಿನ್ನಾಭರಣ ಹಾಗೂ ನಗದು ಕಳವಿಗೀಡಾಗಿದೆ. ಬಂಬ್ರಾಣ ದಿನೇಶ್ ಬೀಡಿ ಸಮೀಪದ ಹಮೀದ್ ಅಬ್ದುಲ್ಲರ ಮನೆಯಿಂದ 9 ಪವನ್ ಚಿನ್ನಾಭರಣ ಹಾಗೂ 85,000 ರೂಪಾಯಿ ಕಳವಿಗೀಡಾಗಿದೆ. ಈ ತಿಂಗಳ 25ರಂದು ರಾತ್ರಿ 7.30ರಿಂದ 8.30 ರ ಮಧ್ಯೆ ಕಳವು ನಡೆದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಮೀದ್ ಅಬ್ದುಲ್ಲರ ಮಗಳ ಪತಿ ಮಲಪ್ಪುರಂ ತಾನೂರು ಪಟ್ಟರುಪರಂಬ್ ನೆಡುವಳ್ಳಿ ಹೌಸ್ನ ನೌಶಾದ್ರ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ೨೫ರಂದು ಮಧ್ಯಾಹ್ನ ಹಮೀದ್ ಅಬ್ದುಲ್ಲರ ಪತ್ನಿ ಹಾಗೂ ಮಕ್ಕಳು ಮದುವೆ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಈ ವೇಳೆ ಮನೆಯಲ್ಲಿ ಹಮೀದ್ ಅಬ್ದುಲ್ಲ ಮಾತ್ರವೇ ಇದ್ದರು. ಅವರು ರಾತ್ರಿ 7.30ಕ್ಕೆ ಸಮೀಪದ ಅಂಗಡಿಗೆ ತೆರಳಿ 8.30ರ ವೇಳೆ ಮರಳಿದ್ದರು. ಅವರು ತಲುಪುವಷ್ಟರಲ್ಲಿ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಎರಡು ಕಪಾಟುಗಳಲ್ಲಿದ್ದ ನಗ-ನಗದು ದೋಚಿ ಪರಾರಿಯಾಗಿ ರುವುದು ತಿಳಿದು ಬಂದಿದೆ. ಮಳೆಗಾಲ ಆರಂಭಗೊಂಡೊಡನೆ ಕಳ್ಳರು ಹಾವಳಿಯೂ ತೀವ್ರಗೊಂ ಡಿದ್ದು, ಈ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರು ತಿಳಿಸಿದ್ದಾರೆ