ಮವ್ವಾರು ಶ್ರೀಕೃಷ್ಣ ಭಜನಾ ಮಂದಿರ ಮಹಾಸಭೆ
ಮವ್ವಾರು : ಶ್ರೀ ಕೃಷ್ಣ ಭಜನ ಮಂದಿರ ಸಮಿತಿ ಮಹಾಸಭೆ ಮಂದಿರದಲ್ಲಿ ಜರಗಿತು. ಮಂದಿರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಗಂಗಾಧರ ರೈ ಮಠದಮೂಲೆ ಅಧ್ಯಕ್ಷತೆ ವಹಿಸಿದರು. ವರದಿ ವಾಚನ, ಲೆಕ್ಕಪತ್ರಗಳನ್ನು ಮಂಡಿಸಿ ಅಂಗೀಕರಿಸಲಾಯಿತು. ನಂತರ ನೂತನ ಕಾರ್ಯಕಾರಿ ಸಮಿತಿ ರೂಪೀಕರಿಸ ಲಾಯಿತು. ಅಧ್ಯಕ್ಷರಾಗಿ ಗಂಗಾಧರ ರೈ ಮಠದಮೂಲೆ, ಉಪಾಧ್ಯಕ್ಷರಾಗಿ ಹರ್ಷ ಕೊಟ್ಟಂಗುಳಿ, ನಾಗರಾಜ ಭಟ್ ಮಠದಮೂಲೆ, ಸುಧಾಮ ಮವ್ವಾರು, ನಾಗರಾಜ ಎಂ .ವಿ ಮಠದಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಮಲ್ಲಮೂಲೆ, ಜತೆ ಕಾರ್ಯದರ್ಶಿಗಳಾಗಿ ನಿಶಾಂತ್ ರೈ ಮವ್ವಾರು, ಅಕ್ಷಿತ್ ಮಲ್ಲಮೂಲೆ, ಗಣಪತಿ ಭಟ್ ವಳಕುಂಜ (ವೈದಿಕ), ಜನಾರ್ದನ ಸಿ.ಎಸ್ ಮವ್ವಾರು (ಭಜನಾ), ಕಲಾವತಿ ಮವ್ವಾರು (ಮಾತೃ ವಿಭಾಗ). ಕೋಶಾಧಿಕಾರಿಯಾಗಿ ಸುಮತಿ ಮವ್ವಾರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಕಾಶ್ ಎನ್.ಎಚ್, ಹರೀಶ್ ಪೆರಿಂಜೆ, ಶ್ಯಾಮ ರೈ ಮಠದಮೂಲೆ, ಗಂಗಾ ಧರ ಎಂ. ವಿ ಮಠದಮೂಲೆ, ಉದಯಶಂಕರ ತಲೆಬೈಲು ಇವರನ್ನು ಆಯ್ಕೆ ಮಾಡಲಾಯಿತು. ಉಪಸಮಿತಿಗಳನ್ನು ರೂಪೀಕರಿಸಲಾಯಿತು. ಅನ್ಶಿಕ ಪ್ರಾರ್ಥನೆ ಹಾಡಿದರು. ನಿಶಾಂತ್ ರೈ ಸ್ವಾಗತಿಸಿ , ಅಕ್ಷಿತ್ ವಂದಿಸಿದರು.