ಮಾದಕ ಪದಾರ್ಥ ವಿರುದ್ಧ ನಿವೃತ್ತ ಎಸ್ಐಯ ಸೈಕಲ್ ರ್ಯಾಲಿ: ಕಾಸರಗೋಡಿನಲ್ಲಿ ಸ್ವಾಗತ
ಕಾಸರಗೋಡು: ನಿವೃತ್ತ ಎಸ್ಐ ಶಾಜಹಾನ್ರ ಮಾದಕ ಪದಾರ್ಥ ವಿರುದ್ಧ ಸಂದೇಶ ಯಾತ್ರೆಗೆ ಚೈಲ್ಡ್ ಪ್ರೊಟೆಕ್ಟ್ ಟೀಮ್ ರಾಷ್ಟ್ರೀಯ ಸಮಿತಿ ಹಾಗೂ ಶಾಲಾ ಪ್ರೊಟೆಕ್ಷನ್ ಗ್ರೂಪ್ ವತಿಯಿಂದ ಜಂಟಿಯಾಗಿ ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಾಗತ ನೀಡಲಾಯಿತು. ಕೊಲ್ಲಂ ಜಿಲ್ಲೆಯಲ್ಲಿ ಎಸ್ಐ ಆಗಿ ನಿವೃತ್ತರಾದ ಎ. ಶಾಜಹಾನ್ 14 ಜಿಲ್ಲೆಗಳಲ್ಲಿ ಸಂಚರಿಸಿ 2025 ಕಿಲೋ ಮೀಟರ್ ಸೈಕಲ್ ಯಾತ್ರೆ ನಡೆಸಿ ಶಾಲಾ ಪರಿಸರವನ್ನು ಕೇಂದ್ರೀಕರಿಸಿ ತಿಳು ವಳಿಕಾ ಕಾರ್ಯಕ್ರಮ ನಡೆಸಿದ್ದಾರೆ.
11ನೇ ದಿನ ಕಾಸರಗೋಡಿಗೆ ತಲುಪಿದ ಇವರಿಗೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನೀಡಿದ ಸ್ವಾಗತ ಕಾರ್ಯಕ್ರಮವನ್ನು ನಗರ ಠಾಣೆ ಎಸ್ಐ ಕೆ. ರಾಜೀವನ್ ಉದ್ಘಾಟಿಸಿದರು. ಚೈಲ್ಡ್ ಪ್ರೊಟೆಕ್ಟ್ ಟೀಮ್ ರಾಷ್ಟ್ರೀಯ ಅಧಕ್ಷ ಸಿ.ಕೆ. ನಾಸರ್ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯಿನಿ ಉಷಾ, ಚೈಲ್ಡ್ ಪ್ರೊಟೆಕ್ಸ್ ಟೀಮ್ ರಾಷ್ಟ್ರೀಯ ಕೋಶಾಧಿಕಾರಿ, ಡಾ. ಸಿ.ಟಿ. ಮುಹಮ್ಮದ್ ಮುಸ್ತಫ ಅಭಿನಂದಿಸಿದರು. ಸಿವಿಲ್ ಪೊಲೀಸ್ ಆಫೀಸರ್ಗಳಾದ ಅಶ್ವತಿ, ರಾಜೇಶ್, ಸುಧೀಶ್, ಅಜೆಯನ್, ಅಧ್ಯಾಪಕರಾದ ಮದನನ್, ಸಿ.ಕೆ. ಅಬ್ದುಲ್ ರಹೀಂ, ಆನ್ಸಿ ಕೆ. ಮ್ಯಾಥ್ಯು ಮಾತನಾಡಿದರು. ಪ್ರಾಂಶುಪಾಲ ಸುನಿಲ್ ಕುಮಾರ್ ಸ್ವಾಗತಿಸಿ, ಪಿಟಿಎ ಅಧ್ಯಕ್ಷ ಅಬೂಬಕ್ಕರ್ ವಂದಿಸಿದರು.