ಮುಳ್ಳೇರಿಯ: ಹಿರಿಯ ಜವುಳಿ ವ್ಯಾಪಾರಿ ನಿಧನ

ಮುಳ್ಳೇರಿಯ: ಮುಳ್ಳೇರಿಯ ಪೇಟೆಯಲ್ಲಿ ಸುಮಾರು 48 ವರ್ಷಗಳ ಕಾಲ ಜವುಳಿ ವ್ಯಾಪಾರಿಯಾಗಿದ್ದ ಕಜಮುಂಡ ವಿಶ್ವನಾಥ ರೈ (73) ನಿಧನ ಹೊಂದಿದರು. ಬಂಟರ ಸಂಘದ ಆದೂರು ವಲಯ ಘಟಕ ಮಾಜಿ ಅಧ್ಯಕ್ಷರಾಗಿದ್ದರು. ಅಸೌಖ್ಯ ನಿಮಿತ್ತ ಕೆಲವು ವರ್ಷಗಳಿಂದ ಮುಳ್ಳೇರಿಯ ವಿವೇಕಾನಂದ ನಗರದಲ್ಲಿರುವ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮೃತರು ಪತ್ನಿ ಶಾಂತಾ ವಿ ರೈ, ಮಕ್ಕಳಾದ ಸಂತೋಷ್ ರೈ, (ಮುಳ್ಳೇರಿಯದಲ್ಲಿ ಜವುಳಿ ವ್ಯಾಪಾರಿ), ಸನತ್ (ಬೆಂಗಳೂರಿನಲ್ಲಿ ಇಂಜಿನಿಯರ್), ಸೊಸೆಯಂದಿರಾದ ಅಶ್ವಿನಿ, ಪ್ರತಿಭಾ, ಸಹೋದರ ವಿಠಲ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page