ಮೊಗ್ರಾಲ್ ಪುತ್ತೂರು: ಬಾಲಕ ನಾಪತ್ತೆ
ಕಾಸರಗೋಡು: ಮೊಗ್ರಾಲ್ ಪುತ್ತೂರು ಕಲ್ಲಂಗೈಯಲ್ಲಿ ೧೫ರ ಹರೆಯದ ಬಾಲಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬೆಂಗಳೂರು ಮಚ್ಚೆಹಳ್ಳಿ ನಿವಾಸಿ ಗಂಗಹನುಮ ಯ್ಯರ ಪುತ್ರ ಜಿ. ನಂದ (15) ನಾಪತ್ತೆಯಾದ ಬಾಲಕ.
ತಾಯಿ ರೇಣುಕ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಲ್ಲಂಗೈಯ ಕ್ವಾರ್ಟರ್ಸ್ನಲ್ಲಿ ಗಂಗ ಹನುಮಯ್ಯರ ಕುಟುಂಬ ವಾಸವಾಗಿದೆ. ೨೮ರಂದು ಬೆಳಿಗ್ಗೆ 6 ಗಂಟೆಗೆ ಮನೆಯಿಂದ ತೆರಳಿದ ಈತ ಬಳಿಕ ಮರಳಲಿಲ್ಲವೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.