ಯುವತಿಯನ್ನು ಕುತ್ತಿಗೆ ಕೊಯ್ದು ಕೊಲೆಗೈದ ಪತಿ
ಕೊಚ್ಚಿ: ಯುವತಿಯನ್ನು ಪತಿ ಕುತ್ತಿಗೆ ಕೊಯ್ದು ಕೊಲೆಗೈದ ಘಟನೆ ಪೆರುಂಬಾವೂರಿನಲ್ಲಿ ನಡೆದಿದೆ. ಅಲ್ಲಿನ ಬಂಗಾಳ ಕಾಲನಿಯಲ್ಲಿ ವಾಸಿಸುವ ಅನ್ಯ ರಾಜ್ಯ ಕಾರ್ಮಿಕೆ ಮಾಮಣಿ ಚೇತ್ರಿ (39) ಎಂಬಾಕೆ ಕೊಲೆಗೀ ಡಾದ ಯುವತಿ. ಮಾಮಣಿಯ ಪತಿ ಬಹದ್ದೂರ್ ಚೇತ್ರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರು ಬಂಗಾಳ ಕಾಲನಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಬಹ ದ್ದೂರ್ ಪತ್ನಿಯ ಮೇಲೆ ಸಂಶಯ ಗೊಂಡಿದ್ದು, ಇದು ಅವರಿಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು. ಇಂದು ಬೆಳಿಗ್ಗೆ ಮತ್ತೆ ವಾಗ್ವಾದ ನಡೆದಿದ್ದು, ಈ ವೇಳೆ ಬಹದ್ದೂರ್ ಚಾಕುವಿನಿಂದ ಮಾಮಣಿಯ ಕುತ್ತಿಗೆಗೆ ಇರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಕಂಡ ಸ್ಥಳೀಯರು ಮಾಮಣಿಯನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.