ರಾಜೀವ್ ಗಾಂಧಿ ಕನಸಿನ ನವಭಾರತ ನಿರ್ಮಾಣಕ್ಕೆ ಸಂಕಲ್ಪ ತೊಡಲು ಕಾಂಗ್ರೆಸ್ ಕರೆ

ಮಂಜೇಶ್ವರ: ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿಯವರ ನವಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೃಢ ಸಂಕಲ್ಪ ತೊಡುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಎಂದು ಸೇವಾದಳ ರಾಜ್ಯ ಅಧ್ಯಕ್ಷ ರಮೇಶನ್ ಕರುವಾಚೇರಿ ನುಡಿದರು. ಆಧುನಿಕ ಭಾರತದ ನಿರ್ಮಾಣ, ಭಯೋತ್ಪಾದನೆ ನಿಗ್ರಹ ಇತ್ಯಾದಿ ವಿಚಾರಗಳಲ್ಲಿ ತಮ್ಮದೇ ಆದ ದೃಷ್ಟಿಕೋನ ಹೊಂದಿದ್ದ ರಾಜೀವ್ ಗಾಂಧಿಯವರ ಉನ್ನತಿ ಸಹಿಸಲಾಗದೆ ರಾಜಕೀಯ ವಿರೋಧಿಗಳು ಕಿರುಕುಳ ನೀಡಿದರೂ, ಆತ್ಮವಿಶ್ವಾಸ ಕಳೆದುಕೊಳ್ಳದೆ ದೇಶವನ್ನು ಡಿಜಿಟಲ್ ಕ್ರಾಂತಿಗೆ ಮುನ್ನಡೆಸಿದರು. ರಾಜೀವ್ ಗಾಂಧಿಯವರ ಹತ್ಯೆಯು ವಾಸ್ತವದಲ್ಲಿ ಕೋಟ್ಯಂತರ ಭಾರತೀಯರ ಕನಸುಗಳ ಹತ್ಯೆಯೂ ಆಗಿತ್ತು. ರಾಜೀವ್ ಗಾಂಧಿಯವರು ಹಾಕಿಕೊಟ್ಟ ಮೇಲ್ಪಂಕ್ತಿ ಅನುಸರಿಸಿ ಪ್ರತಿಯೊಬ್ಬ ಕಾಂಗ್ರೆಸಿಗನೂ ತನ್ನ ಸಾರ್ವಜನಿಕ ಜೀವನ ನಡೆಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದ್ದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರಾಜೀವ್ ಗಾಂಧಿ ಸ್ಮೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವ್ರಹಿಸಿ ಮಾತನಾಡಿದರು. ರಾಜೀವ್ ಗಾಂಧಿಯವರು ದೇಶ ಹಾಗೂ ಪಕ್ಷಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಸೋಮಶೇಖರ ಜೆ.ಎಸ್ ರಾಜೀವ್ ಗಾಂಧಿ ಸಂಸ್ಮರಣೆ ಮಾಡಿ ದರು. ಸೈನ್ಯದಲ್ಲಿ ನಾಲ್ಕು ದಶಕ ಕಾಲ ಸೇವೆ ಸಲ್ಲಿಸಿದ ವಿಶ್ರಾಂತ ಸೈನಿಕ ಬೆಜ್ಜ ಉದಯಕುಮಾರ್ ರನ್ನು ಸನ್ಮಾನಿ ಸಲಾಯಿತು. ರಾಜೀವ್ ಗಾಂಧಿಯ ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಆರಂಭಗೊAಡ ಕಾರ್ಯಕ್ರಮದಲ್ಲಿ ಭಯೋತ್ಪಾದನೆ ವಿರುದ್ಧ ಪ್ರತಿಜ್ಞೆ ಕೈಗೊಳ್ಳಲಾಯಿತು. ನೇತಾರರಾದ ಉಮ್ಮರ್ ಬೋರ್ಕಳ, ಹರ್ಷಾದ್ ವರ್ಕಾಡಿ, ಸತ್ಯನ್ ಸಿ.ಉಪ್ಪಳ, ಗೀತಾ ಬಂದ್ಯೋಡು, ಇಕ್ಬಾಲ್ ಕಳಿಯೂರು, ಮನ್ಸೂರ್ ಬಿ ಎಂ,ಖಲೀಲ್ ಬಜಾಲ್, ನಾಗೇಶ್ ಮಂಜೇಶ್ವರ, ಮೊಹಮ್ಮದ್ ಮಜಾಲ್, ಫಾರೂಕ್ ಶಿರಿಯ, ಹನೀಫ್ ಪಡಿಂಞÁರ್, ದಾಮೋದರ ಮಾಸ್ಟರ್, ಬಾಬು ಬಂದ್ಯೋಡು, ಗಣೇಶ್ ಪಾವೂರು, ಯೋಗೀಶ್ ಉದ್ಯಾವರ, ಮೊಹಮ್ಮದ್ ಜೆ,ವಸಂತರಾಜ್ ಶೆಟ್ಟಿ, ಅಜೀಜ್ ಕಲ್ಲೂರು, ಇರ್ಷಾದ್ ಮಂಜೇಶ್ವರ, ರಾಜೇಶ್ ನಾಯ್ಕ್ ಹೇರೂರು, ಎ ಎಂ ಉಮ್ಮರ್ ಕುಂಞÂ, ನವೀನ್ ಮಾಸ್ಟರ್, ಅಬ್ದುಲ್ಲ ಮಾಸ್ಟರ್ ಮೂಡಂಬೈಲ್, ಉಮ್ಮರ್ ಬೆಜ್ಜ, ಶೀನ ಕೆದುಂಬಾಡಿ, ಎಲಿಯಾಸ್ ಡಿ ಸೋಜಾ, ಉಮ್ಮರ್ ಪಾಲೆಂಗ್ರಿ, ಎ ಎಂ ಅಶ್ರಫ್, ಮುಸ್ತಫಾ ವೇದೋಡಿ, ರಂಜಿತ್ ಮಂಜೇಶ್ವರ, ಜೆಸ್ಸಿ ಕಣ್ವತೀರ್ಥ, ಇಬ್ರಾಹಿಂ ಹಾಜಿ ಉಪಸ್ಥಿತರಿದ್ದರು. ಮುಹಮ್ಮದ್ ಸೀಗಂದಡಿ ಸ್ವಾಗತಿಸಿ, ಚಂದ್ರಶೇಖರ ಶೆಟ್ಟಿ ಬೆಜ್ಜ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page