ರಾಜ್ಯದ ವಿವಿಧೆಡೆ ಇಂದು ಮಳೆ ಸಾಧ್ಯತೆ
ತಿರುವನಂತಪುರ: ರಾಜ್ಯದ ಕೆಲವೆಡೆ ಇಂದು ಮಳೆಗೆ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಬಲವಾದ ಗಾಳಿ ಹಾಗೂ ಸಿಡಿಲು ಸಹಿತ ತೀವ್ರ ಮಳೆ ಸುರಿಯಲಿದೆಯೆಂದು ತಿಳಿಸಲಾಗಿದೆ. ತಿರುವನಂತಪುರ, ಪತ್ತನಂತಿಟ್ಟ, ಕೊಲ್ಲಂ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಬಂಗಾಲ ಸಮುದ್ರದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಿದೆ. ಮುಂದಿನ 48 ಗಂಟೆಯಲ್ಲಿ ಉತ್ತರ ದಿಕ್ಕಿನತ್ತ ಸಾಗಲಿದೆ. ಇದರ ಫಲವಾಗಿ ಮಳೆ ಸುರಿಯಲಿದೆ ಎನ್ನಲಾಗಿದೆ.