ರಾಜ್ಯ ಸರಕಾರದ ನಾಲ್ಕನೇ ವಾರ್ಷಿಕ : ಎಲ್ಲಾ ಜಿಲ್ಲೆಗಳಲ್ಲೂ ಅದ್ದೂರಿಯಾಗಿ ಆಚರಣೆ ; ಎಪ್ರಿಲ್ 21ರಂದು ಕಾಸರಗೋಡಿನಿಂದ ಚಾಲನೆ
ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಎಡರಂಗ ಸರಕಾರದ ನಾಲ್ಕನೇ ವಾರ್ಷಿಕವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅದ್ದೂರಿಯಾಗಿ ಆಚರಿಸಲು ಸರಕಾರ ತೀರ್ಮಾನಿಸಿದೆ. ಇದರಂತೆ ಸ್ಥಳೀಯಾ ಡಳಿತ ಸಂಸ್ಥೆಗಳಿಂದ ಆರಂಭಗೊಂಡು ರಾಜ್ಯ ಮಟ್ಟದ ತನಕ ವಿವಿಧ ಕಾರ್ಯಕ್ರಮಗಳನ್ನು ಆಚರಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಇದರ ಉದ್ಘಾಟನೆ ಎಪ್ರಿಲ್ 21ರಂದು ಕಾಸರಗೋಡಿನಲ್ಲಿ ನಡೆ ಯುವ ಮೂಲಕ ಈ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ ನೀಡಲಾಗು ವುದು. ಇದು ಮೇ ೨೧ರಂದು ತಿರುವನಂ ತಪುರದಲ್ಲಿ ಸಮಾಪ್ತಿಹೊಂದಲಿದೆ.
ವಯನಾಡು, ಪತ್ತನಂತಿಟ್ಟ, ಇಡುಕ್ಕಿ, ಕೋಟ್ಟಯಂ, ಪಾಲಕ್ಕಾಡ್, ಕೊಲ್ಲಂ, ಎರ್ನಾಕುಳಂ, ಮಲಪ್ಪುರಂ, ಕಲ್ಲಿಕೋಟೆ, ಕಣ್ಣೂರು, ಆಲಪ್ಪುಳ, ತೃಶೂರು ಸೇರಿ ಎಲ್ಲಾ ಜಿಲ್ಲೆಗಳಲ್ಲೂ ಇಂತಹ ಕಾರ್ಯಕ್ರಮ ನಡೆದು ಅದು ಮೇ ೨೧ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳಲಿದೆ.
ಈ ಎಲ್ಲಾ ಜಿಲ್ಲೆಗಳಲ್ಲೂ ನಡೆಯುವ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತ್ರವಲ್ಲದೆ ಹಲವು ಸಚಿವರುಗಳೂ ಭಾಗವಹಿಸುವರು. ಸರಕಾರದ ವಿವಿಧ ಸವಲತ್ತುಗಳು ಲಭಿಸುವ ಫಲಾನುಭವಿಗಳ ಜೊತೆ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ಸಭೆಗಳನ್ನು ಈ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗುವುದು. ಸರಕಾರದ ಸಾಧನೆಗಳನ್ನು ಸಾರಿ ಹೇಳುವ ಒಂದು ವಾರದ ತನಕ ಮುಂದುವರಿಯ ಲಿರುವ ಪ್ರದರ್ಶನಗಳನ್ನು ಇದರ ಅಂಗವಾಗಿ ಎಲ್ಲಾ ಜಿಲ್ಲೆಯಲ್ಲಿ ನಡೆಸಲಾಗುವುದು.