ರಾತ್ರಿ ಮರೆಯಲ್ಲಿ ಅಂಗಡಿಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಕಾಸರಗೋಡು: ಮೊಗ್ರಾಲ್ ಪುತ್ತೂರಿಗೆ ಸಮೀಪದ ಕೊರುವೈಲ್‌ನಲ್ಲಿರುವ ನಿವೃತ್ತ   ಬ್ಯಾಂಕ್ ಉದ್ಯೋಗಿ  ಸೋಮನಾಥ ಎಂಬವರ ಅಂಗಡಿಗೆ ದ್ವಿಚಕ್ರ ವಾಹನದಲ್ಲಿ   ಬಂದ ಅಕ್ರಮಿಗಳು  ಕಲ್ಲು ತೂರಾಟ ನಡೆಸಿ ಪರಾರಿಯಾಗಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.

ನಿನ್ನೆ ಮಧ್ಯರಾತ್ರಿ  ಈ ಘಟನೆ ನಡೆದಿದೆ.  ಕಲ್ಲು ತೂರಾಟದಿಂದ ಅಂಗಡಿಯ ಗಾಜು ಪುಡಿಗೈಯ್ಯಲ್ಪಟ್ಟಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕೆಲವು ತಿಂಗಳ ಮೊದಲು ಕೂಡಾ ಇದೇ ಪರಿಸರದ ಎರಡು ಮನೆಗಳಿಗೂ  ಅಕ್ರಮಿಗಳು ಕಲ್ಲು ತೂರಾಟ ನಡೆಸಿದ್ದರು.  ಅಂದೂ ಆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಇದು ಸಮಾಜಘಾತಕರ ದುಷ್ಕೃತ್ಯವಾಗಿದೆಯೆಂದೂ  ಆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕೇಳಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

You cannot copy content of this page