ರಾಷ್ಟ್ರಪತಿ ಶಬರಿಮಲೆಗೆ

ತಿರುವನಂತಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 18 ಅಥವಾ 19ರಂದು ಶಬರಿಮಲೆ ಕ್ಷೇತ್ರ ದರ್ಶನ ನಡೆಸುವರು. ರಾಷ್ಟ್ರಪತಿ ಯೋರ್ವರು ಶಬರಿಮಲೆ ಕ್ಷೇತ್ರ ದಶನ ನಡೆಸುವುದು ಇದು ಮೊದಲ ಬಾರಿಯಾಗಿದೆ.  ಮೇ 18ರಂದು ಕೊಚ್ಚಿಗೆ ತಲುಪುವ ರಾಷ್ಟ್ರಪತಿ ಅಲ್ಲಿಂದ ರಸ್ತೆ ಮೂಲಕ ಅಥವಾ ಹೆಲಿಕಾಫ್ಟರ್‌ನಲ್ಲಿ ಶಬರಿಮಲೆ ಕ್ಷೇತ್ರಕ್ಕೆ ತೆರಳುವರು. 19ರಂದು ಕೋಟ್ಟಯಂ ಜಿಲ್ಲೆಯ ಪಾಲಾದ ಸೈಂಟ್ ಥೋಮಸ್ ಕಾಲೇಜನ ಪ್ಲಾಟಿನಂ ಜ್ಯುಬಿಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ದಿಲ್ಲಿಗೆ ಹಿಂತಿರುಗುವರು.

ರಾಷ್ಟ್ರಪತಿ ಶಬರಿಮಲೆ ಕ್ಷೇತ್ರ ದರ್ಶನ ನಡೆಸುವ ಅಧಿಕೃತ ಮಾಹಿತಿಯನ್ನು ತಿರುವಿದಾಂಕೂರು ಮುಜರಾಯಿ ಮಂಡಳಿಗೆ ಈಗಾಗಲೇ ನೀಡಲಾಗಿದೆ. ಇದರಿಂದಾಗಿ ಶಬರಿಮಲೆಯಲ್ಲಿ ಅಗತ್ಯದ ಭದ್ರತಾ ಕ್ರಮ ಈಗಾಗಲೇ ಆರಂಭಿಸಲಾಗಿದೆ. ರಾಷ್ಟ್ರಪತಿ ಯವರ ಸಂದರ್ಶನದ ಹಿನ್ನೆಲೆಯಲ್ಲಿ ಮೇ 18 ಮತ್ತು 19ರಂದು ಭಕ್ತರಿಗಾಗಿರುವ ಆನ್‌ಲೈನ್ ಮುಂಗಡ ಬುಕ್ಕಿಂಗ್ ಗೆ ನಿಯಂತ್ರಣ ಹೇರಲಾಗಿದೆ

Leave a Reply

Your email address will not be published. Required fields are marked *

You cannot copy content of this page