ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆಗೆ ಸಂಪರ್ಕ ಕಡಿತ: ಸರ್ವೀಸ್ ರಸ್ತೆಯಲ್ಲೇ ಸಂಚರಿಸಲು ಸೂಚನೆ; ಹೆಚ್ಚಿದ ಸಮಸ್ಯೆ
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆಗೆ ಸಂಪರ್ಕ ಕಡಿತಗೊಳಿಸಲಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆಗೆ ಸಂಪರ್ಕ ಕಡಿತಗೊಳಿಸಿದ ಬಗ್ಗೆ ತಿಳಿಸಿ ಫ್ಲೆಕ್ಸ್ ಸ್ಥಾಪಿಸಲಾಗಿದೆ. ತಲಪ್ಪಾಡಿ ಭಾಗದಿಂದ ಬರುವ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬಳಿಯಿಂದ ಕುಂಬಳೆ ಪೇಟೆಗೆ ಪ್ರವೇಶಿಸಬೇಕು. ಅದೇ ರೀತಿ ಕಾಸರಗೋಡಿನಿಂದ ಬರುವ ವಾಹನಗಳು ದೇವಿನಗರದ ಸರ್ವೀಸ್ ರಸ್ತೆಯಿಂದ ರೈಲು ನಿಲ್ದಾಣ ಬಳಿಯ ಅಂಡರ್ ಪಾಸೇಜ್ನ ಮೂಲಕ ತೆರಳುವಂತೆ ತಿಳಿಸಲಾಗಿದೆ. ಆದರೆ ಮಂಗಳೂರು ಹಾಗೂ ಕಾಸರಗೋಡು ಭಾಗದಿಂದ ಸೀತಾಂಗೋಳಿ ಕಿನ್ಫ್ರಾಕ್ಕೆ ಸರಕು ಹೇರಿ ಕಂಟೈನರ್ ಲಾರಿಗಳು ಸಹಿತ ಹಲವು ವಾಹನಗಳು ಬರುತ್ತಿದ್ದು, ಇದೀಗ ಸೂಚಿಸಿದ ಪ್ರಕಾರ ಸಂಚರಿ ಸಲು ಅವುಗಳಿಗೆ ಕಷ್ಟಸಾಧ್ಯ ಎನ್ನಲಾ ಗುತ್ತಿದೆ. ಇದೀಗಿನ ಹೊಸ ವ್ಯವಸ್ಥೆ ಯಿಂದ ಸಮಸ್ಯೆ ಇಮ್ಮಡಿಸಲಿದೆಯೆಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.