ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂತಿಮ ಹಂತದಲ್ಲಿ ನೂರೊಂದು ಸಮಸ್ಯೆ: ಪರಿಹಾರಕ್ಕೆ ಜಿಲ್ಲಾಡಳಿತದಿಂದ ಕ್ರಮ

ಕಾಸರಗೋಡು: ಮಳೆಗಾಲದ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಕಟ್ಟಿನಿಂತು, ಇದರಂಗವಾಗಿ ಉಂಟಾಗುವ ಅಸೌಕರ್ಯಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ನೇತೃತ್ವದಲ್ಲಿ ತೀವ್ರ ಯತ್ನ ನಡೆಸಲಾಗುತ್ತಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿ ಸಮಸ್ಯೆಯನ್ನು ಮನಗಂಡು ಪರಿಹಾರಕ್ಕೆ ನಿರ್ದೇಶ ನೀಡಿ ಜಿಲ್ಲಾ ಮಟ್ಟದಲ್ಲಿ ಕಂಡೀಜನ್ಸಿ ಪ್ಲಾನ್ ಮಂಡಿಸಿದ್ದಾರೆ. ಜನಪ್ರತಿನಿಧಿಗಳು ಮುಂದಿಟ್ಟ ಸಮಸ್ಯೆಗಳನ್ನು ಸೇರಿಸಿ ಅಧಿಕಾರಿಗಳು ಮತ್ತೆ ಸ್ಥಳ ಪರಿಶೀಲಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಕಡೆಗಳಲ್ಲಾಗಿ 101 ಸಮಸ್ಯೆಗಳನ್ನು ಪತ್ತೆ ಮಾಡಿದ್ದಾರೆ. ಈ ಸಮಸ್ಯೆಗಳನ್ನು ಗೂಗಲ್ ಶೀಟ್‌ನಲ್ಲಿ ಸೇರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದ್ದು, ಪ್ರತಿ ಸಮಸ್ಯೆಗಳ ಈಗಿನ ಸ್ಥಿತಿಗತಿಗಳನ್ನು ದಾಖಲಿಸಿರುತ್ತಾರೆ.

ಪೂರ್ಣವಾಗಿ ಪರಿಹರಿಸಿದ ಸಮಸ್ಯೆಗಳು, ಆಂಶಿಕವಾಗಿ ಪರಿಹಾರ ಗೊಂಡವು. ಪರಿಹಾರವಾಗದೆ ಉಳಿದವು ಎಂಬೀ ರೀತಿಯಲ್ಲಿ ಮೂರು ವಿಧದಲ್ಲಿ ಮಾಹಿತಿಗಳನ್ನು ದಾಖಲಿಸಲಾಗುತ್ತಿದೆ. ಡೆಪ್ಯುಟಿ ಕಲೆಕ್ಟರ್ (ಎಲ್‌ಎ) ಎಂ. ರಮೀಸ್‌ರಾಜ, ಡೆಪ್ಯುಟಿ ಕಲೆಕ್ಟರ್ (ಎಲ್‌ಎ, ಎನ್‌ಎಚ್) ಎಸ್. ಬಿಜು ಎಂಬಿವರು ತಜ್ಞಸಮಿತಿಗೆ ನೇತೃತ್ವ ನೀಡಿದ್ದಾರೆ. ತಜ್ಞತಂಡ ಪತ್ತೆ ಮಾಡಿದ ಸಮಸ್ಯೆಗಳಲ್ಲಿ 10ನ್ನು ಈಗಾಗಲೇ ಪರಿಹರಿಸಲಾಗಿದೆ. ೧೩ ಸಮಸ್ಯೆಗಳನ್ನು ಆಂಶಿಕವಾಗಿ ಪರಿಹರಿ ಸಲಾಗಿದೆ. ಉಳಿದ ಎಲ್ಲಾ ಸಮಸ್ಯೆಗಳಿಗೆ ಎರಡು ದಿನದೊಳಗೆ ಪರಿಹಾರ ಕಾಣಬೇಕೆಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಾರ‍್ಯಂಗೋಡು ವೇಳುವಯಲ್ ನಲ್ಲಿ ಸೇತುವೆಯ ಎರಡು ಕಂಬದ ಮಧ್ಯೆಗಿನ ಮಣ್ಣನ್ನು ತೆರವುಗೊಳಿಸ ಲಾಗಿದೆ. ಉಳಿದಿರುವ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ. ಇಲ್ಲಿ ಚರಂಡಿ ನಿರ್ಮಾಣ ಆರಂಭಿಸಲಾಗಿದೆ. ಮೀರ ಮಲಕುನ್ನ್, ಮಟ್ಟಲಾಯಿ ಕುನ್ನ್, ಬೇವಿಂಜೆ, ಚಟ್ಟಂಚಾಲ್‌ನಲ್ಲೂ ತಜ್ಞತಂಡ ತಪಾಸಣೆ ನಡೆಸಿದೆ. ಬೇವಿಂಜದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ 150 ಕುಟುಂಬಗಳಿದ್ದು, ವೀರಮಲಕುನ್ನ್‌ನಲ್ಲಿ  ಒಂದು ಹೋಟೆಲ್, 10 ಮನೆಗಳು ಇವೆ. ಮಟ್ಟಲಾಯಿಕುನ್ನ್‌ನ ಪರಿಸರದಲ್ಲೂ 15 ಕುಟುಂಬಗಳಿವೆ. ತುರ್ತು ಸಂದರ್ಭಗಳಲ್ಲಿ ಇವರನ್ನು ಸ್ಥಳಾಂತ ರಿಸಲು ಅಗತ್ಯದ ಕ್ರಮ ಕೈಗೊಳ್ಳಲಾಗಿದೆ. ತಜ್ಞ ಸಮಿತಿ ಕಂಡುಕೊಂಡ ಸಮಸ್ಯೆಗಳಲ್ಲಿ ಚರಂಡಿಯ ಕೊರತೆ, ಇರುವ ಚರಂಡಿ ಮುಚ್ಚಿರುವುದು, ಗುಡ್ಡೆಯಿಂದ ನೇರವಾಗಿ ಮಣ್ಣು ಕೊರೆದಿರುವುದು ಕಾರಣವೆಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page