ರೈಲಿನಿಂದ ಬಿದ್ದು ಅಬಕಾರಿ ಅಧಿಕಾರಿ ಮೃತ್ಯು

ಕಾಸರಗೋಡು: ಅಬಕಾರಿ ಅಧಿಕಾರಿಯೊಬ್ಬರು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಎಕ್ಸೈಸ್ ಕಾಸರಗೋಡು ಡಿವಿಶನ್‌ನ ಪ್ರಿವೆಂಟಿವ್ ಆಫೀಸರ್, ಕಲ್ಯಾಶೇರಿ ಸೆಂಟ್ರಲ್ ನಿವಾಸಿಯಾದ ಪಿ. ಅಶೋಕನ್ (೫೨) ಎಂಬವರು ಮೃತಪಟ್ಟ ದುರ್ದೈವಿ. ಶನಿ ವಾರ ರಾತ್ರಿ ಕೆಲಸ ಮುಗಿಸಿ ಕಾಚ್ಚೆಗುಡೆ ಎಕ್ಸ್‌ಪ್ರೆಸ್‌ರೈಲಿನಲ್ಲಿ ಪ್ರಯಾಣಿಸಿದ್ದರು. ರೈಲು ಕಣ್ಣೂರು ರೈಲ್ವೇ ನಿಲ್ದಾಣಕ್ಕೆ ತಲುಪುವ ೩೦೦ ಮೀಟರ್ ಅಂತರದಲ್ಲಿ ಇವರು ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆನ್ನ ಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page