ರೈಲಿನಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ವ್ಯಕ್ತಿಯೋರ್ವ ರೈಲಿನಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಝಾರ್ಖಂಡ್ನ ವೆಸ್ಟ್ ಸಿಂಗುಭೂಂ ಕೇರಲ್ಕೆಲ ಮಕ್ತಂಬೆರ ಎಂಬಲ್ಲಿನ ಉದಯ್ ಸಿಂಗ್ ಸಮದ್ ಎಂಬವರ ಪುತ್ರ ಶತ್ರುದ್ಧನ್ ಸಮದ್ (30) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಶಿರಿಯ- ಮುಟ್ಟಂ ಮಧ್ಯೆ ಕರಾವಳಿ ಪೊಲೀಸ್ ಠಾಣೆ ಸಮೀಪ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇ ಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ.