ಲೋಕಸಭಾ ಚುನಾವಣೆಗೆ ಎಡರಂಗ ಸಿದ್ಧತೆ ಮುಖ್ಯಮಂತ್ರಿ, ಸಚಿವರು ಅಖಾಡಕ್ಕೆ

ಕಾಸರಗೋಡು: ಲೋಕಸಭಾ ಚುನಾವಣೆ ಯಾವುದೇ ಸಮಯದಲ್ಲಿ ಘೋಷಿಸಬಹುದೆಂಬ ಲೆಕ್ಕ ಹಾಕಿ ಎಡರಂಗ ಚುನಾವಣೆ ಸಿದ್ಧತೆಗಳಲ್ಲಿ ತೊಡಗಿದೆ. ಇದರ ಅಂಗವಾಗಿ ಮುಖ್ಯಮಂತ್ರಿ ಹಾಗೂ ಸಚಿವರು ವಿಧಾನಸಭಾ ಮಂಡಲ ಪರ್ಯಟನೆ ನಡೆಸಲಿದ್ದಾರೆ. ಮಂಡಲ ಮಟ್ಟದಲ್ಲಿ ಮಂಡಲ ಸದಸ್ಸ್ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ನ.೧೮ರಿಂದ ಡಿಸೆಂಬರ್ ೨೪ರವರೆಗಿರುವ ದಿನಾಂಕಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ೫ ಮಂಡಲಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಭಾಗವಹಿಸುವರು.೧೮ರಂದು ಮಂಜೇಶ್ವರ ಮಂಡಲದಿಂದ ಮಂಡಲ ಸದಸ್ಸ್‌ಗೆ ಚಾಲನೆ ನೀಡಲಾಗುವುದು. ವಿವಿಧ ವಲಯಗಳಲ್ಲಿರುವ ಗಣ್ಯರೊಂದಿಗೆ ಮುಖ್ಯಮಂತ್ರಿ, ಸಚಿವರು ಚರ್ಚೆ ನಡೆಸುವರು. ಆಡಳಿತದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ

Leave a Reply

Your email address will not be published. Required fields are marked *

You cannot copy content of this page