ವರ್ಕ್‌ಶಾಪ್ ಮಾಲಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವಿದ್ಯಾನಗರ ಕೈಗಾರಿಕಾ ಎಸ್ಟೇಟ್ ಆವರಣದೊ ಳಗೆ  ಒಂದೂವರೆ ತಿಂಗಳ ಹಿಂದೆಯಷ್ಟೇ ಕಾರ್ಯಾರಂ ಭಗೊಂಡ  ವರ್ಕ್‌ಶಾಪ್‌ನ ಮಾಲಕ ಮೂಲತಃ ತಮಿಳುನಾಡು ನಿವಾಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಅರುಣ್ ಕುಮಾರ್ (೫೧) ಎಂದು ಗುರುತಿಸ ಲಾಗಿದೆ. ಇವರು ಕಾಸರಗೋಡು ಪೊಲೀಸ್ ಏರ್ ಕ್ಯಾಂಪ್ ಸಮೀಪ ವಾಸಿಸುತ್ತಿರುವ ನಾರಾಯಣನ್ ನಾಯರ್ ಎಂಬವರ ಮಗಳು ಜ್ಯೋತಿಲಕ್ಷ್ಮಿ ಎಂಬವರನ್ನು ಮದುವೆ ಯಾಗಿ ಅಲ್ಲೇ ವಾಸವಾಗಿದ್ದರು. ಮೃತರು ಪತ್ನಿಯ ಹೊರತಾಗಿ ಮಕ್ಕಳಾದ ಅರ್ಚನ, ಆರ್ಯ ಎಂಬವರನ್ನು ಅಗಲಿದ್ದಾರೆ.

ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹದ ಮಹಜರು ನಡೆಸಿದ ಬಳಿಕ ಜನ ರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿ ಸಿದರು. ಅಸೌಖ್ಯದ ನಿಮಿತ್ತ ಅರುಣ್ ಕುಮಾರ್ ಸಾವನ್ನಪ್ಪಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ಬಳಿಕವಷ್ಟೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಬಹುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page